ಆಡಳಿತ ಗೊಂದಲ: ಭಾರತ ಕಬಡ್ಡಿ ಸಂಸ್ಥೆಯೇ ಸಸ್ಪೆಂಡ್‌, ಜಾಗತಿಕ ಕೂಟಗಳಲ್ಲಿ ಸ್ಪರ್ಧೆಗೆ ತಡೆ!

KannadaprabhaNewsNetwork |  
Published : Sep 21, 2024, 01:55 AM ISTUpdated : Sep 21, 2024, 04:32 AM IST
ಭಾರತ ತಂಡ | Kannada Prabha

ಸಾರಾಂಶ

ಅಮಾನತುಗೊಂಡ ಕಾರಣ ಚೊಚ್ಚಲ ಆವೃತ್ತಿಯ ಬೀಚ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ. ಭಾರತೀಯ ತಂಡಗಳ ಸ್ಪರ್ಧೆಗೆ ನಿಷೇಧ ಹೇರಲಾಗಿದೆ.

ನವದೆಹಲಿ: ಆಡಳಿತದ ಗೊಂದಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಾರತೀಯ ಅಮೆಚೂರ್‌ ಕಬಡ್ಡಿ ಸಂಸ್ಥೆ(ಎಕೆಎಫ್‌ಐ)ಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ಅಮಾನತುಗೊಳಿಸಿದೆ. ಈ ಮೂಲಕ ಜಾಗತಿಕ ಕೂಟಗಳಲ್ಲಿ ಭಾರತೀಯ ತಂಡಗಳ ಸ್ಪರ್ಧೆಗೆ ನಿಷೇಧ ಹೇರಿದೆ. 

ಹೀಗಾಗಿ ಚೊಚ್ಚಲ ಆವೃತ್ತಿಯ ಬೀಚ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡಗಳು ಪಾಲ್ಗೊಳ್ಳುವುದಿಲ್ಲ. ಎಕೆಎಫ್‌ಐಗೆ ಕಳೆದ 5 ವರ್ಷಗಳಿಂದ ಚುನಾಯಿತ ಸಮಿತಿಯಿಲ್ಲ. 

ನಿಯಮ ಉಲ್ಲಂಘಣೆ ಕಾರಣಕ್ಕೆ ಎಕೆಎಫ್‌ಐನ ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್‌, ನ್ಯಾ. ಎಸ್‌.ಪಿ. ಗರ್ಗ್‌ ಅವರನ್ನು 2019ರಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಿತ್ತು. 2023ರ ಡಿಸೆಂಬರ್‌ನಲ್ಲಿ ಎಕೆಎಫ್‌ಐಗೆ ಚುನಾವಣೆ ನಡೆದಿತ್ತಾದರೂ ನಿಯಮ ಪಾಲಿಸಿಲ್ಲ ಎಂದು ದೆಹಲಿ ಹೈಕೋರ್ಟ್‌ ಚುನಾವಣೆಯನ್ನು ಅಸಿಂಧುಗೊಳಿಸಿತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌
ಮಾ.5ರಂದು ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆ