ಅಪಘಾತದಿಂದಾಗಿ ಕಾಲನ್ನೇ ಕತ್ತರಿಸುತ್ತಾರೆ ಎಂಬ ಭಯವಿತ್ತು: ರಿಷಭ್‌ ಪಂತ್‌

KannadaprabhaNewsNetwork |  
Published : Feb 03, 2024, 01:52 AM IST
ರಿಷಭ್‌ ಪಂತ್‌ | Kannada Prabha

ಸಾರಾಂಶ

13 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿರುವ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರು ಕಾರು ಅಪಘಾತದ ಭಯಾನಕ ಅನುಭವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಅಪಘಾತದ ಬಳಿಕ ಕಾಲು ಕತ್ತರಿಸುವ ಭಯವಿತ್ತು ಎಂದಿದ್ದಾರೆ.

ನವದೆಹಲಿ: 13 ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವುಳಿದಿರುವ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರು ಕಾರು ಅಪಘಾತದ ಭಯಾನಕ ಅನುಭವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದು, ಅಪಘಾತದ ಬಳಿಕ ಕಾಲು ಕತ್ತರಿಸುವ ಭಯವಿತ್ತು ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಯಾವುದೇ ನರ ತುಂಡಾಗಿದ್ದರೆ ಕಾಲು ಕತ್ತರಿಸುತ್ತಾರೆ. ಅದು ನನಗೆ ಭಯ ಉಂಟು ಮಾಡಿತ್ತು. ಆದರೆ ದೊಡ್ಡ ಅನಾಹುತ ಆಗದಿರುವುದು ನನ್ನ ಅದೃಷ್ಟ ಎಂದಿದ್ದಾರೆ. ಅಲ್ಲದೆ ವೈದ್ಯರು ನಿಗದಿಪಡಿಸಿದ ಸಮಯಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಏಕದಿನ: ಆಸ್ಟ್ರೇಲಿಯಾಕ್ಕೆ8 ವಿಕೆಟ್‌ ಭರ್ಜರಿ ಗೆಲುವುಮೆಲ್ಬರ್ನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಕೀಸ್‌ ಕಾರ್ಟಿ(88), ರೋಸ್ಟನ್‌ ಚೇಸ್‌(59) ಅರ್ಧಶತಕದಾಟದ ಹೊರತಾಗಿಯೂ 48.4 ಓವರ್‌ಗಳಲ್ಲಿ 231ಕ್ಕೆ ಆಲೌಟಾಯಿತು. ಸಾಧಾರಣ ಗುರಿ ಬೆನ್ನತ್ತಿದ ಆಸೀಸ್‌ 38.3 ಓವರ್‌ಗಳಲ್ಲಿ 2 ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು. ಕ್ಯಾಮರೂನ್‌ ಗ್ರೀನ್‌(77), ಸ್ಟೀವ್‌ ಸ್ಮಿತ್‌(79), ಜೋಶ್‌ ಇಂಗ್ಲಿಸ್‌ (65) ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದರು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ