ಸಾತ್ವಿಕ್‌, ಚಿರಾಗ್‌ಗೆ ಖೇಲ್‌ ರತ್ನ,ಶಮಿ, ವೈಶಾಲಿಗೆ ಅರ್ಜುನ ಪ್ರಶಸ್ತಿ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

Pacer Mohammed Shami, one of the architects of India's near successful World Cup campaign, has been nominated for this year's Arjuna Award, while men's doubles badminton pair of Satwik Sairaj Rankireddy and Chirag Shetty was selected for the Major Dhyan Chand Khel Ratna Award.

ನವದೆಹಲಿ: ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್‌ ಖೇಲ್‌ ರತ್ನಕ್ಕೆ ಆಯ್ಕೆಯಾಗಿದ್ದಾರೆ. 2023ರಲ್ಲಿ ಅಮೋಘ ಪ್ರದರ್ಶನ ತೋರಿರುವ ಈ ಜೋಡಿಯನ್ನು 12 ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ.

ಇದೇ ವೇಳೆ ಏಕದಿನ ವಿಶ್ವಕಪ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿ ಭಾರತ ಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಮೊಹಮದ್‌ ಶಮಿ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಶಮಿ ಜೊತೆ ಇನ್ನೂ 16 ಕ್ರೀಡಾಪಟುಗಳ ಹೆಸರು ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.

ಕ್ರೀಡಾ ಪ್ರಶಸ್ತಿಗಳಿಗೆ ನಾಮ ನಿರ್ದೇಶನ-

ಖೇಲ್‌ ರತ್ನ: ಸಾತ್ವಿಕ್‌, ಚಿರಾಗ್‌ (ಬ್ಯಾಡ್ಮಿಂಟನ್‌).

ಅರ್ಜುನ ಪ್ರಶಸ್ತಿ: ಶಮಿ (ಕ್ರಿಕೆಟ್‌), ಅಜಯ್‌ ರೆಡ್ಡಿ (ಅಂಧರ ಕ್ರಿಕೆಟ್‌), ಓಜಸ್‌ ದಿಯೋತಲೆ, ಅದಿತಿ ಸ್ವಾಮಿ (ಆರ್ಚರಿ), ಶೀತಲ್‌ ದೇವಿ (ಪ್ಯಾರಾ ಆರ್ಚರಿ), ಪಾರುಲ್‌ ಚೌಧರಿ, ಶ್ರೀಶಂಕರ್‌ ಮುರಳಿ (ಅಥ್ಲೆಟಿಕ್ಸ್‌), ಮೊಹಮದ್‌ ಹುಸ್ಮುದ್ದಿನ್‌ (ಬಾಕ್ಸಿಂಗ್‌), ಆರ್‌.ವೈಶಾಲಿ (ಚೆಸ್‌), ದಿವ್ಯಕೃತಿ ಸಿಂಗ್‌, ಅನುಶ್‌ ಅಗರ್ವಾಲಾ (ಈಕ್ವೆಸ್ಟ್ರಿಯನ್‌), ದೀಕ್ಷಾ ಡಾಗರ್‌ (ಗಾಲ್ಫ್‌), ಕೃಷನ್‌ ಪಾಠಕ್‌, ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್‌ ಬಾಲ್‌), ಐಶ್ವರಿ ಪ್ರತಾಪ್‌ (ಶೂಟಿಂಗ್‌), ಅಂತಿಮ್‌ ಪಂಘಲ್‌ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್‌ ಟೆನಿಸ್‌).

ಧ್ಯಾನ್‌ ಚಂದ್‌ ಜೀವಮಾನ ಸಾಧನೆ ಪ್ರಶಸ್ತಿ: ಕವಿತಾ (ಕಬಡ್ಡಿ), ಮಂಜುಶಾ ಕನ್ವರ್‌ (ಬ್ಯಾಡ್ಮಿಂಟನ್‌), ವಿನೀಶ್‌ ಶರ್ಮಾ (ಹಾಕಿ).

ದ್ರೋಣಾಚಾರ್ಯ ಪ್ರಶಸ್ತಿ (ಶ್ರೇಷ್ಠ ಕೋಚ್‌): ಗಣೇಶ್‌ ಪ್ರಭಾಕರನ್‌ (ಮಲ್ಲಕಂಬ), ಮಹಾವೀರ್‌ ಸೈನಿ (ಪ್ಯಾರಾ ಅಥ್ಲೆಟಿಕ್ಸ್‌), ಲಲಿತ್‌ ಕುಮಾರ್‌ (ಕುಸ್ತಿ), ಆರ್‌.ಬಿ.ರಮೇಶ್‌ (ಚೆಸ್‌), ಶಿವೇಂದ್ರ ಸಿಂಗ್‌ (ಹಾಕಿ).

Share this article