ಹೈದರಾಬಾದ್: ಭಾರತ ಕ್ರಿಕೆಟ್ ತಂಡದಲ್ಲಿ ಶುಭಮನ್ ಗಿಲ್ಗೆ ಅನುಭವಿ ಬ್ಯಾಟರ್ ಚೇತಶ್ವರ್ ಪೂಜಾರಗಿಂತ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಕಾಣುತ್ತಿರುವುದಕ್ಕೆ ಸಂಬಂಧಿಸಿ ಮಾತನಾಡಿರುವ ಕುಂಬ್ಳೆ, ಗಿಲ್ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ರಣಜಿ ಪಂದ್ಯದಲ್ಲಿ ದ್ವಿಶತ ದಾಖಲಿಸಿದ್ದ ಚೇತೇಶ್ವರ್ ಪೂಜಾರ ಅವರನ್ನು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಂತರ ನಿರ್ಲಕ್ಷಿಸಿಲಾಗಿದೆ. ರೋಹಿತ್ ಶರ್ಮಾ ಯುವ ಆಟಗಾರರಿಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ. ಅದರಿಂದ 2ನೇ ಟೆಸ್ಟ್ನಲ್ಲಿ ಗಿಲ್ ತಮ್ಮ ಮನಸ್ಥಿತಿ ಹೊಂದಿಸಿಕೊಳ್ಳಬೇಕು ಮತ್ತು ತಂತ್ರಗಳೊಂದಿಗೆ ಆಡಬೇಕು. 2ನೇ ಟೆಸ್ಟ್ ವೇಳೆ ಗಿಲ್ ಗಮನ ವಹಿಸಬೇಕಾದ ಅಪಾಯಕಾರಿ ಒತ್ತಡ ಅವರ ಮೇಲಿದೆ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.