ಥಾಯ್ಲೆಂಡ್ ಮಾಸ್ಟರ್ಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್, ಮಿಥುನ್ ಮಂಜುನಾಥ್ ಶುಭಾರಂಭ ಮಾಡಿದ್ದಾರೆ.
ಬ್ಯಾಂಕಾಂಕ್: ಥಾಯ್ಲೆಂಡ್ ಮಾಸ್ಟರ್ಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್, ಮಿಥುನ್ ಮಂಜುನಾಥ್ ಶುಭಾರಂಭ ಮಾಡಿದ್ದಾರೆ.
ಬುಧವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್ ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ಧ 22-20, 21-19ರಿಂದ ಗೆದ್ದು ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮಿಥುನ್ ಮಂಜುನಾಥ್ ಹಾಂಕಾಂಗ್ನ ಜೇಸನ್ ಗುಣವಾನ್ ಅವರನ್ನು 21-17, 21-8 ರಿಂದ ಸೋಲಿಸಿದರು. 2ನೇ ಸುತ್ತಿನಲ್ಲಿ ಮಿಥುನ್-ಶ್ರೀಕಾಂತ್ ಮುಖಾಮುಖಿಯಾಗಲಿದ್ದಾರೆ. ಶಂಕರ್ ಸುಬ್ರಹ್ಮಣ್ಯನ್ ಕೂಡಾ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದು, ಸಮೀರ್ ವರ್ಮಾ, ಕಿರಣ್ ಜಾರ್ಜ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಮಾಳವಿಕಾ, ಆಶ್ಮಿತಾ ಛಲಿಹಾ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.