ಬಿಬಿಸಿಯಲ್ಲಿ ಖಲಿಸ್ತಾನಿ ಪರ ಸುದ್ದಿವಾಚಕಿ: ಭಾರತ ಸಂಜಾತರ ಆಕ್ಷೇಪ

KannadaprabhaNewsNetwork |  
Published : Mar 10, 2024, 01:31 AM IST
ಜಸ್‌ಪ್ರೀತ್‌ ಕೌರ್‌ | Kannada Prabha

ಸಾರಾಂಶ

ಬಿಬಿಸಿ ಸುದ್ದಿವಾಚಕಿಯಾಗಿ ಇತ್ತೀಚೆಗೆ ಸೇರಿಕೊಂಡಿರುವ ಜಸ್‌ಪ್ರೀತ್‌ ಕೌರ್‌ ಖಲಿಸ್ತಾನಿ ಪರ ಬರಹಗಳನ್ನು ಬರೆದು ಪ್ರಕಟಿಸಿರುವ ಕುರಿತು ಭಾರತೀಯ ಸಂಜಾತರಿಂದ ಆಕ್ಷೇಪ ವ್ಯಕ್ತವಾಗಿದೆ.

ಲಂಡನ್‌: ಜಗತ್ತಿನ ಖ್ಯಾತ ಸುದ್ದಿ ಮಾಧ್ಯಮವಾದ ಬಿಬಿಸಿಯಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿ ಸುದ್ದಿವಾಚಕಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸುದ್ದಿವಾಚಕಿ ವಜಾಗೆ ಬ್ರಿಟನ್‌ನ ಭಾರತೀಯ ಸಂಜಾತರು ಆಗ್ರಹಿಸಿದ್ದಾರೆ.

ಬಿಬಿಸಿ ಏಷ್ಯಾ ನೆಟ್‌ವರ್ಕ್‌ ವಿಭಾಗಕ್ಕೆ ನಿರೂಪಕಿ ಜಸ್‌ಪ್ರೀತ್‌ ಕೌರ್‌ ಇತ್ತೀಚೆಗೆ ಸೇರಿಕೊಂಡಿದ್ದಾರೆ. ಈಕೆ ಈ ಹಿಂದೆ ತಮ್ಮ ಟ್ವೀಟರ್ ಖಾತೆಯಲ್ಲಿ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಖಲಿಸ್ತಾನಿ ಪರ ಬರಹ ಬರೆದಿದ್ದರು. ಈ ಎಲ್ಲ ಪೋಸ್ಟ್‌ಗಳು ಸುದ್ದಿ ವಾಚಕಿಯಾಗಿ ಆಯ್ಕೆಯಾದ ಬೆನ್ನಲ್ಲೆ ಹೆಚ್ಚು ವೈರಲ್‌ ಆಗಿವೆ. ಹೀಗಾಗಿ ಇವರ ವಿರುದ್ಧ ಅನಿವಾಸಿ ಭಾರತೀಯರು, ಬಿಬಿಸಿಯ ಭಾರತ ಮೂಲದ ಮುಖ್ಯಸ್ಥ ಸಮೀರ್‌ ಶಾ ಅವರಿಗೆ ದೂರು ನೀಡಿದ್ದಾರೆ. ದೂರುಗಳನ್ನು ಪರಿಶೀಲಿಸುತ್ತೇವೆ ಎಂದು ಬಿಬಿಸಿ ಹೇಳಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ