ಮಾಜಿ ಪ್ರಧಾನಿ ರಾಜೀವ್‌ ಹತ್ಯೆ ಕೇಸಿನ ಮೂವರು ದೋಷಿಗಳು ಲಂಕಾಕ್ಕೆ

KannadaprabhaNewsNetwork |  
Published : Apr 04, 2024, 01:08 AM ISTUpdated : Apr 04, 2024, 04:42 AM IST
ಮಾಜಿ ಪ್ರಧಾನಿ ರಾಜೀವ್‌ ಹತ್ಯೆ ಕೇಸಿನ ಮೂವರು ದೋಷಿಗಳು | Kannada Prabha

ಸಾರಾಂಶ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಶ್ರೀಲಂಕಾದ ಮೂವರು ಬುಧವಾರ ತಮ್ಮ ತವರು ದೇಶ ಶ್ರೀಲಂಕಾಕ್ಕೆ ತೆರಳಿದರು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಶಿಕ್ಷೆ ಅನುಭವಿಸಿ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ ಶ್ರೀಲಂಕಾದ ಮೂವರು ಬುಧವಾರ ತಮ್ಮ ತವರು ದೇಶ ಶ್ರೀಲಂಕಾಕ್ಕೆ ತೆರಳಿದರು. 

ವಿ. ಮುರುಗನ್ ಅಲಿಯಾಸ್ ಶ್ರೀಕರನ್, ಎಸ್. ಜಯಕುಮಾರ್ ಮತ್ತು ಬಿ.ರಾಬರ್ಟ್ ಪಯಸ್ ವಿಮಾನದ ಮೂಲಕ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತೆರಳಿದರು. 2022ರ ನವೆಂಬರ್‌ನಲ್ಲಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 7 ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. 

ಆದರೆ ಕೆಲವೊಂದು ಕಾನೂನು ಪ್ರಕ್ರಿಯೆ ಪೂರ್ಣವಾಗದ ಕಾರಣ ಅವರು ಇಲ್ಲಿನ ಲಂಕಾ ನಿರಾಶ್ರಿತರ ಶಿಬಿರದಲ್ಲೇ ಉಳಿದುಕೊಂಡಿದ್ದರು. 1991ರ ಮೇ.21 ರಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಶ್ರೀಪೆರುಂಬದೂರ್‌ ಬಳಿ ನಿಷೇಧಿತ ಎಲ್‌ಟಿಟಿಇ ಸಂಘಟನೆ ಆತ್ಮಹತ್ಯಾ ಬಾಂಬರ್‌ ಮೂಲಕ ಕೊಲೆ ಮಾಡಲಾಗಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಜನರು ಒಪ್ಪಲಿ, ಬಿಡಲಿ, ಬಲವಂತವಾಗಿ ಆದ್ರೂ ಗ್ರೀನ್‌ಲ್ಯಾಂಡ್‌ ವಶ: ಟ್ರಂಪ್‌ ಪಣ
ಬ್ರಿಟನ್‌ಗೆ ಶಿಕ್ಷಣಕ್ಕೆ ಹೋಗಲು ಇನ್ನು ಯುಎಇ ನೆರವು ಇಲ್ಲ!