ಬೆಟ್ಟದಹಳ್ಳಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

| Published : Apr 05 2025, 12:48 AM IST

ಬೆಟ್ಟದಹಳ್ಳಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟದಹಳ್ಳಿ ಶ್ರೀ ವೀರಭದ್ರೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಏ.5ರಿಂದ ಏ.9ರ ವರೆಗೆ ಸುಮಾರು ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವೀರಭದ್ರೇಶ್ವರ ಸ್ವಾಮಿಯ ದೇವಾಲಯ ಕಾರ್ಯದರ್ಶಿ ನಂದೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲ್ಲೂಕಿನ ಬೆಟ್ಟದಹಳ್ಳಿ ಶ್ರೀ ವೀರಭದ್ರೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಏ.5ರಿಂದ ಏ.9ರ ವರೆಗೆ ಸುಮಾರು ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವೀರಭದ್ರೇಶ್ವರ ಸ್ವಾಮಿಯ ದೇವಾಲಯ ಕಾರ್ಯದರ್ಶಿ ನಂದೀಶ್ ತಿಳಿಸಿದರು. ಶುಕ್ರವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಏ.5ರಂದು ಧ್ವಜಾರೋಹಣ ನಡೆಯಲಿದ್ದು ,ಏ.6ರಂದು ಶ್ರೀ ವೀರಭದ್ರೇಶ್ವರ ಸ್ವಾಮಿಯ ಆರತಿ ಅಗ್ನಿಕೊಂಡ ಮಹೋತ್ಸವ, ರಾತ್ರಿ ಅಳಿಲಘಟ್ಟ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿಯ ಆಗಮನದೊಂದಿಗೆ ಉತ್ಸವ ನಡೆಯಲಿದೆ. ಏ.7ರಂದು ಮಧ್ಯಾಹ್ನ ಅಭಿಜನ್ ಲಗ್ನದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿಯ‌ ಮಹಾ ರಥೋತ್ಸವ ನಡೆಯಲಿದ್ದು ಭಕ್ತಾದಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿದೆ. ರಾತ್ರಿ ಭಾರಿ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ. ನಂತರ ಸಂಗೀತ ರಸಮಂಜರಿ ಹಮ್ಮಿಕೊಳಲಾಗಿದೆ. 8ರಂದು ವೃಷಭ ವಾಹನೋತ್ಸವ ಏ.9ರಂದು ಸ್ವಾಮಿಯ ಪಾನಕ‌ ಫಲಹಾರ ಮಹಾಮಂಗಳಾರತಿ ನಡೆಯಲಿದೆ. ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು‌ ತಿಳಿಸಿದರು. ವಕೀಲರಾದ ಬಿ.ಎಂ.ನಂಜುಂಡಪ್ಪ ಮಾತನಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಐದು ದಿನಗಳ ಜಾತ್ರೆ ನಡೆಯಲಿದ್ದು ಮಹಾ ರಥೋತ್ಸವಕ್ಕೆ ಸಾಹಸ್ರಾರು ಭಕ್ತರು ಭಾಗವಹಿಸುವುದರಿಂದ ಈ ಬಾರಿ ವಿಶೇಷವಾಗಿ 10 ಸಾವಿರ ಲಡ್ಡುನ್ನು ಮಾಡಲಾಗಿದೆ.ಬರುವ ಭಕ್ತಾದಿಗಳಿಗೆ ಮಹಾ ದಾಸೋಹ ಹಮ್ಮಿಕೊಳಲಾಗಿದೆ. ದೇವಾಲಯದ ವತಿಯಿಂದ ಮೂಕಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಪ್ರಾಂಶುಪಾಲರಾದ ರಂಗಪ್ಪ ದೇವಾಲಯ ಸಮಿತಿ ಸಿದ್ದರಾಮಣ್ಣ , ಮುಖಂಡರಾದ ಬಿ.ಎಂ ನಂಜುಂಡಯ್ಯ, ಬಸವರಾಜು , ರಂಗಪ್ಪ , ರವೀಶ್ , ಮಹಾದೇವಣ್ಣ ,ನಂಜುಂಡಪ್ಪ , ಜಯಪ್ರಕಾಶ್ ದೇವಾಲಯದ ಪದಾಧಿಕಾರಿಗಳು ಭಾಗವಹಿಸಿದ್ದರು.