ಹಾಲು ಉತ್ಪಾದಕರಿಗೆ ಗುಣಮಟ್ಟವಲ್ಲದ ಪೀಡ್‌ ಕೊಡೋದು ಖಂಡನೀಯ

| Published : Jun 02 2025, 01:26 AM IST / Updated: Jun 02 2025, 01:27 AM IST

ಹಾಲು ಉತ್ಪಾದಕರಿಗೆ ಗುಣಮಟ್ಟವಲ್ಲದ ಪೀಡ್‌ ಕೊಡೋದು ಖಂಡನೀಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಹಾಲು ಮಹಾ ಮಂಡಳಿಯವರು ಹಾಲು ಉತ್ಪಾದಕ ರೈತರಿಗೆ ಗುಣಮಟ್ಟವಲ್ಲದ ಪೀಡ್‌ನ್ನು ಕೊಡುತ್ತಿರುವುದು ಖಂಡನೀಯವೆಂದು ಕೋಚಿಮೂಲ್ ಮಾಜಿ ನಿರ್ದೇಶಕ ಅಶ್ವಥನಾರಾಯಣಬಾಬು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕರ್ನಾಟಕ ಹಾಲು ಮಹಾ ಮಂಡಳಿಯವರು ಹಾಲು ಉತ್ಪಾದಕ ರೈತರಿಗೆ ಗುಣಮಟ್ಟವಲ್ಲದ ಪೀಡ್‌ನ್ನು ಕೊಡುತ್ತಿರುವುದು ಖಂಡನೀಯವೆಂದು ಕೋಚಿಮೂಲ್ ಮಾಜಿ ನಿರ್ದೇಶಕ ಅಶ್ವಥನಾರಾಯಣಬಾಬು ಆರೋಪಿಸಿದ್ದಾರೆ.

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕ್ಷೀರಬ್ರಹ್ಮ ವರ್ಗಿಸ್ ಕುರಿಯನ್ ಹಾಗೂ ಎಂ.ವಿ.ಕೃಷ್ಣಪ್ಪರ ಜನ್ಮದಿನಾಚರಣೆಯ ಅಂಗವಾಗಿ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಬಾಣಂತಿಯರಿಗೆ ಹಾಗೂ ರೋಗಿಗಳಿಗೆ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳೊಡಗೂಡಿಹಾಲಿನ ಪಾಕೆಟ್‌ಗಳನ್ನು ವಿತರಿಸಿ ಮಾತನಾಡಿದರು. ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಹಸುಗಳಿಗೆ ನೀಡುತ್ತಿರುವ ಪೀಡ್ ಗುಣಮಟ್ಟ ಕಡಿಮೆಯಾಗಿರುವುದರಿಂದ ರೈತರು ಕೆ.ಎಂ.ಎಫ್ ವಿರುದ್ದ ತಮ್ಮ ಆಸಮಾದಾನ ವ್ಯಕ್ತಪಡಿಸುತಿದ್ದು, ವ್ಯವಸ್ಥಾಪಕ ನಿರ್ದೇಶಕರು ಪೀಡ್‌ನಲ್ಲಿ ನೂನ್ಯತೆಗಳನ್ನು ಮನಗಂಡು ಕೆ.ಎಂ.ಎಫ್‌ಗೆ ದೂರು ನೀಡಿ ಹಾಲು ಉತ್ಪಾದಕ ರೈತರ ಪರ ನಿಲ್ಲಬೇಕೆಂದು ಊಲವಾಡಿ ಅಶ್ವಥನಾರಾಯಣಬಾಬು ತಾಕೀತು ಮಾಡಿದರು.

ಡಾ. ಕುರಿಯನ್‌ರನ್ನು ಬಿಟ್ಟರೆ ಕರ್ನಾಟಕದಲ್ಲಿ ಕ್ಷೀರ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದವರು ಕ್ಷೀರಬ್ರಹ್ಮ ಎಂ.ವಿ ಕೃಷ್ಣಪ್ಪರವರು ಯಾವುದೇ ನದಿ ನಾಲೆ ಹಾಗೂ ಶಾಶ್ವತ ನೀರಾವರಿ ಇಲ್ಲದ ಜಿಲ್ಲೆಗಳಿಗೆ ಕೃಷ್ಣಪ್ಪರವರ ದೂರದೃಷ್ಟಿಯಿಂದಾಗಿ ಬರಡು ಭೂಮಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆಗೆ ಶಾಶ್ವತವಾದ ಪರಿಹಾರ ಕಲ್ಪಿಸಿಕೊಡಬೇಕೆಂಬ ನಿಟ್ಟಿನಲ್ಲಿ ಹಾಲು ಒಕ್ಕೂಟವನ್ನು ಸ್ಥಾಪನೆ ಮಾಡಿ ಇಂದು ಅವಿಭಜಿತ ಜಿಲ್ಲೆಗಳ ಬಡ ಜನತೆ ಹಾಗೂ ರೈತರ ಬಾಳಿನಲ್ಲಿ ಬೆಳಕಾಗಿದ್ದಾರೆ.

ಚಿಂತಾಮಣಿ ತಾಲೂಕು ೧ ಲಕ್ಷ ೪೦ ಸಾವಿರ ಲೀಟರ್‌ನಷ್ಟು ಹಾಲನ್ನು ಉತ್ಪಾದನೆ ಮಾಡುತ್ತಿರುವ ದೊಡ್ಡ ತಾಲೂಕಾಗಿದ್ದು, ಸಚಿವ ಡಾ.ಎಂ.ಸಿ ಸುಧಾಕರ್ ಕೋಚಿಮೂಲ್‌ನ್ನು ವಿಭಜನೆ ಮಾಡಿ ಚಿಮೂಲ್ ಮಾಡಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಚಿಮೂಲ್ ಅಭಿವೃದ್ದಿಗೆ ಪಣತೊಟ್ಟೊದ್ದಾರೆ ಕರ್ನಾಟಕ ಹಾಲು ಮಹಾ ಮಂಡಳಿಯವರು ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ನಮ್ಮದೇ ಜಮೀನನ್ನು ಪಡೆದುಕೊಂಡು ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ಕೊಟ್ಟು ಪೀಡ್ ಫ್ಯಾಕ್ಟರಿಯಲ್ಲಿ ಉತ್ತಮ ಗುಣಮಟ್ಟದವಲ್ಲದ ಪೀಡ್‌ನ್ನು ಉತ್ಪಾದನೆ ಮಾಡುತ್ತಿರುವುದರಿಂದ ಹಾಲು ಉತ್ಪಾದಕರ ರೈತರು ಕೆ.ಎಂಎಫ್ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ನೂನ್ಯತೆಗಳನ್ನು ಮನಗಂಡು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರು ಕೆ.ಎಂ.ಎಪ್ ಗಮನಕ್ಕೆ ತಂದು ಉತ್ತಮ ಗುಣಮಟ್ಟದ ಪೀಡ್‌ನ್ನು ಹಾಲು ಉತ್ಪಾದಕ ರೈತರಿಗೆ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಡಾ. ಹರ್ಷಿತ, ಚಿಂತಾಮಣಿ ಶಿಬಿರ ಕಛೇರಿಯ ಉಪವ್ಯವಸ್ಥಾಪಕ ಡಾ. ಮಹೇಶ್, ಕತ್ತಿರಗುಪ್ಪೇ ಹಾಲು ಉತ್ಪಾದಕರ ಸಹಕಾರ ಸಂಘದ ಅದ್ಯಕ್ಷ ನಾರಾಯಣಸ್ವಾಮಿ ವಿಸ್ತರಣಾಧಿಕಾರಿಗಳಾದ ಶಬೀರ್‌ಪಾಷಾ, ಗುಲಾಬ್‌ಜಾನ್, ವಿನಯ್‌ಕುಮಾರ್, ವಸಂತಲಕ್ಷ್ಮೀ, ಪ್ರತಿಭಾ ಸೇರಿದಂತೆ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.