ಬೆಂಗಳೂರು : ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಹರಿದ ಗೂಡ್ಸ್‌ ವಾಹನ : ಸಾವು

KannadaprabhaNewsNetwork |  
Published : Oct 14, 2024, 01:26 AM ISTUpdated : Oct 14, 2024, 05:14 AM IST
ಬಾಲಕ ಸಾವು | Kannada Prabha

ಸಾರಾಂಶ

ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಗೂಡ್ಸ್‌ ವಾಹನದ ಚಕ್ರ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಅ.11 ಸಂಜೆ ಸುಮಾರು 6 ಗಂಟೆಗೆ ನಾಗವಾರದ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

  ಬೆಂಗಳೂರು : ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆಮೇಲೆ ಗೂಡ್ಸ್‌ ವಾಹನದ ಚಕ್ರ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಅ.11 ಸಂಜೆ ಸುಮಾರು 6 ಗಂಟೆಗೆ ನಾಗವಾರದ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಿಎಚ್‌ಇಎಲ್‌ನ ಬಾಪೂಜಿನಗರದ ನಿವಾಸಿ ತನ್ವೀರ್‌ ಪಾಷಾ ಎಂಬುವವರ ಪುತ್ರ ತಾಹೀರ್‌ ಪಾಷಾ(5) ಮೃತ ದುರ್ದೈವಿ. ಈ ಸಂಬಂಧ ಗೂಡ್ಸ್‌ ವಾಹನ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಬಾಲಕ ತಾಹೀರ್‌ ಪಾಷಾ ಕುಪ್ಪಸ್ವಾಮಿ ಲೇಔಟ್‌ನ 10ನೇ ಕ್ರಾಸ್‌ನಲ್ಲಿ ಓಡಿ ಬರುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಬೈಕ್‌ ಹ್ಯಾಂಡಲ್‌ಗೆ ಗುದ್ದಿಕೊಂಡಿದ್ದಾನೆ. ಈ ವೇಳೆ ಆಯತಪ್ಪಿ ಬಾಲಕ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದೆ ಬರುತ್ತಿದ್ದ ಗೂಡ್ಸ್‌ ವಾಹನದ ಹಿಂದಿನ ಎಡ ಚಕ್ರಗಳು ಬಾಲಕನ ತಲೆ ಮೇಲೆ ಉರುಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯರು ಹಾಗೂ ಕುಟುಂಬದವರು ಸಮೀಪದ ಆಸ್ಪತ್ರೆಗೆ ಕರೆದುಯ್ಯವಾಗ ಮಾರ್ಗಮಧ್ಯಯೇ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು