ಹಲಗೂರು: ಚಿರತೆ ದಾಳಿಗೆ ಕರು ಬಲಿ

KannadaprabhaNewsNetwork |  
Published : Feb 04, 2026, 02:00 AM IST
3ಕೆಎಂಎನ್ ಡಿ25 | Kannada Prabha

ಸಾರಾಂಶ

ಚಿರತೆ ದಾಳಿಯಿಂದ ಕರು ಬಲಿಯಾಗಿರುವ ಘಟನೆ ಹಲಗೂರು ಸಮೀಪದ ಚಿಲ್ಲಾಪುರ ಗ್ರಾಮದ ಬಳಿ ನಡೆದಿದೆ. ಗ್ರಾಮದ ಕಾಳರಾಜು ಅವರ ಜಮೀನಿನಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ಕಾಣಿಸಿಕೊಂಡು ಕರುವಿನ ಕತ್ತಿನ ಭಾಗ ಕಚ್ಚಿ ರಕ್ತ ಕುಡಿದ ನಂತರ ಹೊಟ್ಟೆ ಭಾಗವನ್ನು ಬಗೆದು ಮಾಂಸ ತಿಂದು ಪರಾರಿಯಾಗಿದೆ.

ಹಲಗೂರು:

ಚಿರತೆ ದಾಳಿಯಿಂದ ಕರು ಬಲಿಯಾಗಿರುವ ಘಟನೆ ಸಮೀಪದ ಚಿಲ್ಲಾಪುರ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಕಾಳರಾಜು ಅವರ ಜಮೀನಿನಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ಕಾಣಿಸಿಕೊಂಡು ಕರುವಿನ ಕತ್ತಿನ ಭಾಗ ಕಚ್ಚಿ ರಕ್ತ ಕುಡಿದ ನಂತರ ಹೊಟ್ಟೆ ಭಾಗವನ್ನು ಬಗೆದು ಮಾಂಸ ತಿಂದು ಪರಾರಿಯಾಗಿದೆ. ಇದರಿಂದ ಸುಮಾರು ರು. 10,000ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಮೂಲತಃ ಗೊಲ್ಲರಹಳ್ಳಿಯ ಕಾಳರಾಜು ಅವರು ಚಿಲ್ಲಾಪುರದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸೋಮವಾರ ಸಂಜೆ ಸಾಗ್ಯ ಸರಗೂರು ಜಾತ್ರೆಗೆ ಹೋಗಿ ಮಂಗಳವಾರ ಬೆಳಗಿನ ಜಾವ ವಾಪಸ್ ಅವರ ಜಮೀನಿಗೆ ಬಂದಾಗ ಕರು ಸತ್ತಿರುವುದು ಕಂಡುಬಂದಿದೆ.

ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಪ್ರಾದೇಶಿಕ ಅರಣ್ಯವಲಯದ ಗಸ್ತು ಅರಣ್ಯಪಾಲಕ ಪಿ.ಎಂ.ಕೃಷ್ಣ ಭೇಟಿ ನೀಡಿ ಪರಿಶೀಲಿಸಿ ಪಶುವೈದಾಧಿಕಾರಿ ಮುತ್ತಪ್ಪ ಕರುವಿನ ಶವಪರೀಕ್ಷೆ ನಡೆಸಿದರು.

ಕಾಳರಾಜು ಮಾತನಾಡಿ, ನಾವು ಸಾಕುಪ್ರಾಣಿಗಳನ್ನು ಸಾಕಿ ಕೊಂಡು ವ್ಯವಸಾಯ ಮಾಡಿದ್ದೇವೆ. ರಾತ್ರಿ ವೇಳೆ ಚಿರತೆ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯಪಡುವ ಪರಿಸ್ಥಿತಿ ಇದೆ. ಅರಣ್ಯ ಇಲಾಖೆಯವರು ಬೋನು ಇಟ್ಟು ಚಿರತೆ ಹಿಡಿಯಬೇಕು. ನಮಗೆ ಸೂಕ್ತ ಪರಿಹಾರ ಕೊಡಿಸಬೇಕು ಮನವಿ ಸಲ್ಲಿಸಿದ್ದಾರೆ.

ಬಾಲಕನಿಗೆ ಬೈಕ್ ನೀಡಿದ ಮಾಲೀಕನಿಗೆ 25 ಸಾವಿರ ರು. ದಂಡ

ಮಳವಳ್ಳಿ:

ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ ಬೈಕ್ ಮಾಲೀಕನಿಗೆ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರು. ದಂಡ ವಿಧಿಸಿದೆ.

2020ರ ನವೆಂಬರ್‌ನಲ್ಲಿ ತಾಲೂಕಿನ ಕಿರುಗಾವಲು ಹೋಬಳಿಯ ಚನ್ನಪಿಳ್ಳೆಕೊಪ್ಪಲು ಗ್ರಾಮದ ಬೀರಯ್ಯ ಚಾಲನೆಗಾಗಿ ಬಾಲಕನಿಗೆ ತಮ್ಮ ಬೈಕ್ ನೀಡಿದ್ದರು. ಈ ವೇಳೆ ಮಳವಳ್ಳಿ-ಮೈಸೂರು ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಗ್ರಾಮಾಂತರ ಪೊಲೀಸರು ಬೈಕ್ ನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಮಳವಳ್ಳಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು ಸೋಮವಾರ ಬೈಕ್ ನೀಡಿದ್ದ ಮಾಲೀಕ ಬೀರಯ್ಯ ಗೆ 25 ಸಾವಿರ ರು.ದಂಡ ಹಾಗೂ ಮೂರು ದಿನಗಳ ಸಾಧಾರಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಈಗಾಗಲೇ ಬೀರಯ್ಯ 2025ರ ಜುಲೈನಲ್ಲಿ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ದಂಡ ಪಾವತಿಗೆ ಮಾತ್ರ ಆದೇಶಿಸಿರುವ ನ್ಯಾಯಾಧೀಶರು ದಂಡ ಪಾವತಿ ವಿಫಲರಾದರೆ 22 ದಿನಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

6 ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೊಲೀಸ್ ಹಲ್ಲೆ? ಬಲವಂತದ ಸಾಕ್ಷಿ ವಿಡಿಯೋ ಚಿತ್ರಿಕರಣ
ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ