ಪಿಡಬ್ಲ್ಯುಡಿ ಎಇಇ ಮನೆ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Mar 06, 2026, 01:30 AM IST
5ಕೆಎಂಎನ್‌ಡಿ04 | Kannada Prabha

ಸಾರಾಂಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಡ್ಯದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಡ್ಯದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ದಾಳಿಗೆ ಒಳಗಾದ ಅಧಿಕಾರಿ. ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸುರೇಶ್ ಬಾಬು ನೇತೃತ್ವದಲ್ಲಿ ಸತೀಶ್ ಅವರ ಮನೆ, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದರು.

ಬಂದೀಗೌಡ ಬಡಾವಣೆಯಲ್ಲಿರುವ ಬಾಡಿಗೆ ಮನೆ, ಮರೀಗೌಡ ಬಡಾವಣೆಯಲ್ಲಿರುವ ತಂದೆ ಮನೆ, ಕಚೇರಿ, ಪತ್ನಿಯ ತವರು ಮನೆಗೂ ಅಧಿಕಾರಿಗಳು ತೆರಳಿ ಪರಿಶೀಲಿಸಿದರು. ದಾಳಿ ಸಮಯದಲ್ಲಿ 6 ಲಕ್ಷ ರು. ನಗದು, ಕಾವೇರಿ ಸಿರಿ ಲೇಔಟ್‌ನಲ್ಲಿ ಎರಡು ನಿವೇಶನ, ಬೆಂಗಳೂರು ಸತ್ವದಲ್ಲಿ 1 ಪ್ಲಾಟ್, ಆರ್‌ಪಿಸಿ ಲೇಔಟ್‌ನಲ್ಲಿ ಒಂದು ನಿವೇಶ, ಮಂಡ್ಯ ತಾಲೂಕು ಕಾತುಂಗೆರೆ ಗ್ರಾಮಕ್ಕೆ ಹೊಂದಿಕೊಂಡಿರುವ ಮನುಗನಹಳ್ಳಿ ವ್ಯಾಪ್ತಿಯಲ್ಲಿ 5 ಎಕರೆ ಜಮೀನು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.ಸತೀಶ್ ಬಳಿ ಇರುವ ಆಸ್ತಿ ಏಷ್ಟು..?

ಸ್ಥಿರಾಸ್ತಿ ಮೌಲ್ಯ ಒಟ್ಟು 2,19,68, 976 ರು.ಮೂರು ನಿವೇಶನಗಳ ಅಂದಾಜು ವೆಚ್ಚ 97, 22,976 ರು.

ಎರಡು ಮನೆಗಳ ಅಂದಾಜು ಮೌಲ್ಯ1.06 ಕೋಟಿ ರು.ಆರು ಎಕರೆ ಕೃಷಿ ಭೂಮಿ ಅಂದಾಜು ಮೌಲ್ಯ 16.44 ಲಕ್ಷ ರು.

ಚರಾಸ್ತಿ ಒಟ್ಟು ಮೌಲ್ಯ 2,26,90,000 ರು.ಒಟ್ಟು ನಗದು ಹಣ- 6,70,000 ರು.

20 ಲಕ್ಷ ರು. ಮೌಲ್ಯದ ಚಿನ್ನಾಭರಣ23 ಲಕ್ಷ ರು. ಮೌಲ್ಯದ ವಾಹನಗಳು

ಬ್ಯಾಂಕ್ ಖಾತೆಯಲ್ಲಿರುವ ಹಣ, ನಿಶ್ಚಿತ ಠೇವಣಿ ಇತರೆ ಖರ್ಚು ಸೇರಿ 1,77,20,000 ರು.ಕಾನೂನು ಬದ್ಧ ಆದಾಯ 1,45,00,000 ರು.

ಸತೀಶ್ ಸಂಪಾದಿಸಿರುವ ಅಕ್ರಮ ಆದಾಯ - 1,98,46,000 ರು.ಆಸ್ತಿಗಳ ವಿವರ

1 ಕಾವೇರಿ ಸತ್ವದಲ್ಲಿ ಸೈಟ್ ನಂ.329-35,42,976 ರು.2 ಕಾವೇರಿ ಸತ್ವದಲ್ಲಿ ಸೈಟ್ ನಂ.330- 33 ಲಕ್ಷ ರು.

3 ಕಾವೇರಿ ಸತ್ವದಲ್ಲಿ ಬಿಡದಿಯಲ್ಲಿ 1 ಪ್ಲಾಟ್- 43 ಲಕ್ಷ ರು.4 ಮೊದಲನೇ ಪತ್ನಿಗೆ ವಿಚ್ಛೇಧನ ಪರಿಹಾರ- 25 ಲಕ್ಷ ರು.

5 ಎಕ್ಸ್ ಯು ವಿ 700 ಎಎಸ್ 7 ಕಾರ್- 23 ಲಕ್ಷ ರು.ಒಟ್ಟು- 1,59,42,976 ರು.

ಒಟ್ಟು ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿ 3,01,58,976 ರು. ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

₹7 ಕೋಟಿ ಜಪ್ತಿ ಹಣ ರಕ್ಷಣೆಗೆ ರಾತ್ರಿ ಪೊಲೀಸ್‌ ಠಾಣೆಯೇ ಬಂದ್‌?
ಕಾಲಲ್ಲಿ ತುಳಿದು ಸಂಬಂಧಿ ಕೊಂದು ಅಸಹಜ ಸಾವೆಂದು ಕಥೆ ಕಟ್ಟಿದ್ದ ಕೊಲೆಗಾರ ಬಂಧನ