ಭುವನೇಶ್ವರ: ಹಾವು ಕಚ್ಚಿ ಸಾವನ್ನಪ್ಪಿದರೆ ಇರುವ ತಲಾ 4 ಲಕ್ಷ ರು. ಪರಿಹಾರ ಹಣದ ಆಸೆಗಾಗಿ ಒಡಿಶಾದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ 2 ವರ್ಷದ ಪುತ್ರಿಯನ್ನು ನಾಗರವಾವಿನಿಂದ ಕಚ್ಚಿಸಿ ಕೊಲೆ ಮಾಡಿಸಿದ ಭೀಕರ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.
ಹೀಗಾಗಿ ಉರಗತಜ್ಞನಿಂದ ಧಾರ್ಮಿಕ ಆಚರಣೆಗೆಂದು ನಾಗರಹಾವನ್ನು ತಂದು ಪತ್ನಿ ಹಾಗೂ ಮಗು ಮಲಗಿದ್ದ ಕೋಣೆಯೊಳಗೆ ಬಿಟ್ಟು ಅದರಿಂದ ಕಚ್ಚಿಸಿ ಕೊಲೆ ಮಾಡಿದ್ದಾನೆ. ಈ ಘಟನೆ ಅಕ್ಟೋಬರ್ನಲ್ಲಿ ನಡೆದಿದೆ. ಆತನ ಮಾವ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.