ನಕಲಿ ಚಿನ್ನ ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗೆ ನಾಮ ಹಾಕಿದ ಖದೀಮರು

KannadaprabhaNewsNetwork |  
Published : May 24, 2026, 02:00 AM IST
ಮಂಗಳೂರಿನಲ್ಲಿ ಕೆಜಿಟಿಟಿಐನ ನೂತನ ಹವಾನಿಯಂತ್ರಿತ ಕಟ್ಟಡವನ್ನು ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಲಕ್ಷಾಂತರ ರು.ಸಾಲ ಪಡೆದು ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ನ ಚಿನ್ನಮೌಲ್ಯಮಾಪಕ ಸೇರಿ ನಾಲ್ವರ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಲಕ್ಷಾಂತರ ರು.ಸಾಲ ಪಡೆದು ಬ್ಯಾಂಕ್‌ಗೆ ವಂಚಿಸಿದ ಆರೋಪದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ನ ಚಿನ್ನಮೌಲ್ಯಮಾಪಕ ಸೇರಿ ನಾಲ್ವರ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ತೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖಾ ವ್ಯವಸ್ಥಾಪಕ ಎಸ್‌.ಎನ್‌.ಆದರ್ಶ್‌ ನೀಡಿದ ದೂರಿನ ಅನ್ವಯ ಬ್ಯಾಂಕ್‌ನ ಚಿನ್ನ ಮೌಲ್ಯಮಾಪಕ ರವಿಕುಮಾರ್, ಆತನ ಸಹಚರರಾದ ಮೋಹನ್‌ ರೆಡ್ಡಿ, ಕೇಶವ ಮತ್ತು ಮಹದೇಶ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಮೌಲ್ಯಮಾಪಕನಿಂದ ಬೆಳಕಿಗೆ:

ಆರೋಪಿಗಳ ಪೈಕಿ ರವಿಕುಮಾರ್‌ ಬ್ಯಾಂಕ್‌ ವರ್ತೂರು ಶಾಖೆಯಲ್ಲಿ ಮೂರು ವರ್ಷಗಳಿಂದ ಚಿನ್ನ ಮೌಲ್ಯಮಾಪಕನಾಗಿ ಕೆಲಸ ಮಾಡುತ್ತಿದ್ದು, ಆತ ಮೋಹನ್‌ ರೆಡ್ಡಿ, ಕೇಶ‍ವ ಮತ್ತು ಮಹದೇಶ್‌ಗೆ ಕಮಿಷನ್‌ ಆಸೆ ತೋರಿಸಿ ನಕಲಿ ಚಿನ್ನಾಭರಣಗಳನ್ನು ಅವರಿಬ್ಬರ ಹೆಸರಿನಲ್ಲಿ ಅಡಮಾನ ಇರಿಸಿ ಲಕ್ಷಾಂತರ ರು. ಸಾಲ ಪಡೆಯುತ್ತಿದ್ದ. ಬಳಿಕ ಅವರಿಗೆ ಇಂತಿಷ್ಟು ಕಮಿಷನ್‌ ಹಣ ನೀಡುತ್ತಿದ್ದ. ಈ ಮಧ್ಯೆ ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆ ಬೇರೊಬ್ಬ ಚಿನ್ನ ಮೌಲ್ಯಮಾಪಕನ ಮೂಲಕ ಚಿನ್ನಾಭರಣ ಪರಿಶೀಲಿಸಿದ್ದಾಗ ಮೋಹನ್‌ ರೆಡ್ಡಿ ಹೆಸರನಲ್ಲಿರುವ ಚಿನ್ನಾಭರಣಗಳು ನಕಲಿ ಎಂಬುದು ಗೊತ್ತಾಗಿದೆ. ಹಾಗೆಯೇ ಬೇರೆ ಶಾಖೆಗಳಲ್ಲಿ ಪರಿಶೀಲಿಸಿದಾಗ ಮೋಹನ್‌ ರೆಡ್ಡಿ, ಕೇಶವ ಮತ್ತು ಮಹದೇಶ್ ಹೆಸರಿನಲ್ಲಿ ಅಡಮಾನ ಇರಿಸಿರುವ ಚಿನ್ನಾಭರಣಗಳು ಕೂಡ ನಕಲಿ ಎಂಬುದು ಗೊತ್ತಾಗಿದೆ.

ಹೀಗಾಗಿ ಮೂವರನ್ನು ಬ್ಯಾಂಕ್‌ಗೆ ಕರೆಸಿ ವಿಚಾರಣೆ ನಡೆಸಿದಾಗ, ರವಿಕುಮಾರ್‌, ತನ್ನ ಚಿನ್ನಾಭರಣಗಳನ್ನು ತನ್ನ ಹೆಸರಿನಲ್ಲಿ ಅಡಮಾನ ಇರಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹೆಸರಿನಲ್ಲಿ ಅಡಮಾನ ಇರಿಸಿ, ಸಾಲ ಪಡೆದು, ಬಳಿಕ ಅದಕ್ಕೆ ಕಮಿಷನ್‌ ನೀಡುತ್ತೇನೆ ಎಂದು ನಂಬಿಸಿದ್ದ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬ್ಯಾಂಕ್‌ಗೆ 16.53 ಲಕ್ಷ ರು.ವಂಚಿಸಿದ ರವಿಕುಮಾರ್ ಹಾಗೂ ಆತನ ಮೂವರು ಸಹಚರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಪೊಲೀಸ್‌ ಕಾನ್‌ಸ್ಟೇಬಲ್‌ ಪತ್ನಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ
ನಕಲಿ ಕಾಲ್ ಸೆಂಟರ್‌ ಸ್ಥಾಪಿಸಿ ಅಮೆರಿಕನ್ನರಿಗೆ ವಂಚಿಸಿದ ಇಬ್ಬರು 10 ದಿನ ಕಸ್ಟಡಿಗೆ