ಕನ್ನಡಪ್ರಭ ವಾರ್ತೆ ಬೆಂಗಳೂರು
ನಾಯಂಡಹಳ್ಳಿಯ ವಿಶಾಲ್(23) ಬಂಧಿತ. ಆರೋಪಿ ವಿಶಾಲ್ ಹಾಗೂ ಈತನ ಸಹಚರರಾದ ಅಪ್ಪು, ಮಂದ, ಮದನ್, ಸೂರ್ಯ, ಸಂದೀಪ್, ಮನೋಜ್ ಜ.26ರಂದು ರಾತ್ರಿ ನಾಯಂಡಹಳ್ಳಿಯ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ಪ್ರಬುದ್ಧ, ನಂದನ್, ಮನೋಜ್ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಾರನ್ನು ಜಖಂಗೊಳಿಸಿದ್ದರು.
ಈ ಸಂಬಂಧ ಪ್ರಬುದ್ಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಐದಾರು ಮಂದಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏನಿದು ಘಟನೆ?:
ಕ್ಷುಲ್ಲಕ ಕಾರಣಕ್ಕೆ ಗಲಾಟೆ:
ಬಳಿಕ ರಾತ್ರಿ 8.30ಕ್ಕೆ ಪ್ರಬುದ್ಧ ಹಾಗೂ ಸ್ನೇಹಿತರು ನಾಯಂಡಹಳ್ಳಿಗೆ ಬಂದಿದ್ದಾರೆ. ಬಳಿಕ ಪ್ರಬುದ್ಧ, ದರ್ಶನ್, ಮನೋಜ್ ಹಾಗೂ ನಂದನ್ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ಮಾತನಾಡುವಾಗ, ಆರೋಪಿಗಳಾದ ಅಪ್ಪು, ಮದನ್, ಸೂರ್ಯ, ಸಂದೀಪ್ ಹಾಗೂ ಸಹಚರರು ಬಂದಿದ್ದಾರೆ.
ಈ ವೇಳೆ ಆರೋಪಿ ಅಪ್ಪು ನಮ್ಮ ಹುಡುಗರ ಜತೆ ಗಲಾಟೆ ಮಾಡುತ್ತೀರಾ ಎಂದು ಏಕಾಏಕಿ ಕತ್ತಿ ತೆಗೆದು ಪ್ರಬುದ್ಧ ಹಾಗೂ ಆತನ ಸ್ನೇಹಿತರ ಮೇಲೆ ಬೀಸಿದ್ದಾನೆ. ಉಳಿದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಬಳಿಕ ಪ್ರಬುದ್ಧ ಹಾಗೂ ಸ್ನೇಹಿತರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಲ್ಲೇ ಇದ್ದ ಕಾರಿನ ಗಾಜುಗಳನ್ನು ಒಡೆದು ಧ್ವಂಸ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಬುದ್ಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ಅಪ್ಪು, ವಿಶಾಲ್ ಹಾಗೂ ಸಹಚರರು ಸರಿಯಿಲ್ಲ. ಅವರ ಸಹವಾಸ ಮಾಡಬೇಡ ಎಂದು ಪ್ರಬುದ್ಧ ತನ್ನ ಸ್ನೇಹಿತನ ತಮ್ಮನಿಗೆ ಬುದ್ಧಿವಾದ ಹೇಳಿದ್ದ. ಆದರೆ, ಸ್ನೇಹಿತನ ತಮ್ಮ ಈ ವಿಚಾರವನ್ನು ಆರೋಪಿಗಳ ಬಳಿಯೇ ಹೇಳಿದ್ದ. ಹೀಗಾಗಿ ಆರೋಪಿಗಳು ಪ್ರಬುದ್ಧ ಹಾಗೂ ಆತನ ಸ್ನೇಹಿತರ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.