)
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾಗವಾರ ಟಿ.ಚನ್ನಯ್ಯಲೇಔಟ್ನ ಎಂ. ಮಂಜುನಾಥ್ ಹಾಗೂ ಅವರ ಪುತ್ರ ಎಂ. ಹೇಮಂತ್ ಬಂಧಿತರಾಗಿದ್ದು, ಆರೋಪಿಗಳಿಂದ ಲ್ಯಾಪ್ಟಾಪ್ಗಳ ಬಿಡಿ ಭಾಗಗಳು ಹಾಗೂ ಹಾರ್ಡ್ಡಿಸ್ಕ್ಗಳು ಸೇರಿದಂತೆ 80 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಎಚ್ಬಿಆರ್ ಲೇಔಟ್ನ ನಿತೇಶ್ ಕಂಪ್ಯೂಟರ್ಸ್ ಮಳಿಗೆಗೆ ಶಟರ್ ಬೀಗ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಕೃತ್ಯದ ತನಿಖೆಗಿಳಿದ ಗೋವಿಂಪುರ ಠಾಣೆ ಇನ್ಸ್ಪೆಕ್ಟರ್ ಕಿರಣ್ ನೇತೃತ್ವ ತಂಡವು, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ತಂದೆ-ಮಗನನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ತಾನು ಕೆಲಸ ಮಾಡುತ್ತಿದ್ದ ಅಂಗಡಿ
ಬುರ್ಖಾ ಧರಿಸಿ ಅಪ್ಪ-ಮಗ ಕನ್ನ
ಅಂತೆಯೇ ಮಾ.13 ರಂದು ಅಂಗಡಿ ವಹಿವಾಟು ಮುಗಿಸಿ ಬಾಗಿಲು ಬಂದ್ ಮಾಡಿ ರಘು ಮನೆಗೆ ಮರಳಿದ್ದರು. ಆಗ ರಾತ್ರಿ ಅವರ ಅಂಗಡಿಗೆ ತಮ್ಮ ಗುರುತು ಸಿಗದಂತೆ ಮರೆ ಮಾಚಲು ಬುರ್ಖಾ ಧರಿಸಿ ಅಪ್ಪ-ಮಗ ಕನ್ನ ಹಾಕಿದ್ದಾರೆ. ಆ ಅಂಗಡಿ ಶಟರ್ ಬೀಗ ಮುರಿದು ಒಳ ಪ್ರವೇಶಿಸಿದ ಆರೋಪಿಗಳು, ಅಲ್ಲಿದ್ದ ಲ್ಯಾಪ್ಟಾಪ್ ಹಾಗೂ ಕಂಪ್ಯೂಟರ್ಸ್ ಬಿಡಿ ಭಾಗಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಮರುದಿನ ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಜಾಡು ಸಿಕ್ಕಿದೆ. ಈ ಸುಳಿವು ಆಧರಿಸಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.
- ಆರೋಪಿ ಹೇಮಂತ್ ಮಳಿಗೆಯಲ್ಲಿ ಲ್ಯಾಪ್ಟಾಪ್ ರಿಪೇರಿ ಕೆಲಸಕಿದ್ದ-ಹಣದ ವಿಚಾರಕ್ಕೆ ಮಾಲೀಕ ಆತನನ್ನು ಕೆಲಸದಿಂದ ತೆಗೆದಿದ್ದ
-ಇದರಿಂದ ಸಿಟ್ಟಿಗೆದ್ದ ಆತ ಮಾಲೀಕನಿಗೆ ಬುದ್ಧಿ ಕಲಿಸಲು ಸಂಚು ರೂಪಿಸಿದ-ಈ ಕೃತ್ಯಕ್ಕೆ ಮಗನಿಗೆ ತಂದೆ ಸಾಥ್ ಕೊಟ್ಟು ಈಗ ಇಬ್ಬರು ಜೈಲುಪಾಲಾಗಿದ್ದಾರೆ