ಇಷ್ಟು ಕಷ್ಟದಲ್ಲೂ ದರ್ಶನ್‌ ಮಾನಸಿಕವಾಗಿ ಸ್ಟ್ರಾಂಗ್‌ ಆಗಿದ್ದಾರೆ : ವಿಜಯಲಕ್ಷ್ಮೀ

Published : Feb 23, 2026, 12:29 PM IST
vijayalakshmi darshan

ಸಾರಾಂಶ

‘ಡಿ-ಬಾಸ್‌ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ಮಾನಸಿಕವಾಗಿ ತುಂಬಾ ಸ್ಟ್ರಾಂಗ್‌ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು. ನಿಮ್ಮಿಂದ ಅವರು ಚೆನ್ನಾಗಿದ್ದಾರೆ’.  ಹೀಗೆಂದವರು ದರ್ಶನ್‌ ಪತ್ನಿ ವಿಜಯಲಕ್ಷ್ಮೀ

 ಸಿನಿವಾರ್ತೆ

‘ಡಿ-ಬಾಸ್‌ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ಮಾನಸಿಕವಾಗಿ ತುಂಬಾ ಸ್ಟ್ರಾಂಗ್‌ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು. ನಿಮ್ಮಿಂದ ಅವರು ಚೆನ್ನಾಗಿದ್ದಾರೆ’.

ಹೀಗೆಂದವರು ದರ್ಶನ್‌ ಪತ್ನಿ ವಿಜಯಲಕ್ಷ್ಮೀ. ಮಂಡ್ಯದಲ್ಲಿ ನಡೆದ ‘ಹಯಗ್ರೀವ’ ಸಿನಿಮಾದ ಟ್ರೇಲರ್‌ ಅನ್ನು ಅವರು ಬಿಡುಗಡೆ ಮಾಡಿದರು. ಈ ಸಿನಿಮಾ ಫೆ.27ರಂದು ಬಿಡುಗಡೆಯಾಗುತ್ತಿದೆ.

ಉಸಿರಿರುವವರೆಗೆ ದರ್ಶನ್‌ ಜೊತೆಗೆ ಇರೋಣ

ನಟ ಧನ್ವೀರ್‌, ‘ನಾವು ಉಸಿರಿರುವವರೆಗೆ ದರ್ಶನ್‌ ಜೊತೆಗೆ ಇರೋಣ. ನನ್ನ ಮೊದಲ ಸಿನಿಮಾದಿಂದಲೂ ನೀವೆಲ್ಲರೂ ಪ್ರೀತಿ-ಪ್ರೋತ್ಸಾಹ ತೋರಿಸುತ್ತಾ ಬಂದಿದ್ದೀರಿ. ಅದೇ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ. ಥಿಯೇಟರ್‌ಗೆ ಬಂದು ಸಿನಿಮಾ ನೋಡಿ’ ಎಂದರು.

ನಿರ್ಮಾಪಕ, ಶಾಸಕ ಸಮೃದ್ಧಿ ಮಂಜುನಾಥ್‌, ‘ಹಯಗ್ರೀವ ಒಂದು ವರ್ಷದ ಹಿಂದೆಯೇ

ಬಿಡುಗಡೆಯಾಗಬೇಕಿತ್ತು. ಡಿ-ಬಾಸ್‌ ಇಲ್ಲದ ಕಾರಣ ಬಿಡುಗಡೆ ಮಾಡಿರಲಿಲ್ಲ’ ಎಂದರು.

ಟ್ರೇಲರ್‌ ಬಿಡುಗಡೆ ವೇಳೆ ಅನಿರೀಕ್ಷಿತವಾಗಿ ಮಳೆ ಸುರಿದದ್ದು ವಿಶೇಷವಾಗಿತ್ತು.

ಹಾಸ್ಯನಟರಾದ ಚಿಕ್ಕಣ್ಣ, ಗಿಲ್ಲಿ ನಟ, ವಿನೀಶ್‌ ದರ್ಶನ್‌, ಬಿಗ್‌ಬಾಸ್‌ನ ಅಶ್ವಿನಿ ಗೌಡ, ಕೆ.ಆರ್‌.ಪೇಟೆ ಶಾಸಕ ಹೆಚ್‌.ಟಿ.ಮಂಜು ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಅದ್ದೂರಿಯಾಗಿ ಸೆಟ್ಟೇರಿದ ರಿಷಬ್‌ ಶೆಟ್ಟಿ ಹೊಸ ಸಿನಿಮಾ ಜೈ ಹನುಮಾನ್‌
70ನೇ ಫಿಲಂಫೇರ್‌ ಅವಾರ್ಡ್‌: ಅಕ್ಷತಾ ಪಾಂಡವಪುರ, ಶ್ರೀಮುರಳಿಗೆ ಪ್ರಶಸ್ತಿ