ಖ್ಯಾತ ಗಾಯಕ ವಿದ್ಯಾಭೂಷಣ ಹರಿದಾಸರ ದಿನಚರಿ ಸಿನಿಮಾ ಮೂಲಕ ಪುರಂದರ ದಾಸರ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ಗೆ

KannadaprabhaNewsNetwork |  
Published : Nov 16, 2024, 12:31 AM ISTUpdated : Nov 16, 2024, 07:24 AM IST
ವಿದ್ಯಾಭೂಷಣ | Kannada Prabha

ಸಾರಾಂಶ

ಖ್ಯಾತ ಗಾಯಕ ವಿದ್ಯಾಭೂಷಣ ಹರಿದಾಸರ ದಿನಚರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.

ಖ್ಯಾತ ಗಾಯಕ ಶ್ರೀ ವಿದ್ಯಾಭೂಷಣ ಅವರು ‘ಹರಿದಾಸರ ದಿನಚರಿ’ ಎಂಬ ಸಿನಿಮಾದಲ್ಲಿ ಪುರಂದರ ದಾಸರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ವಿದ್ಯಾಭೂಷಣರೇ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿರುವುದು ವಿಶೇಷ. 

ಈ ಸಿನಿಮಾ ಕುರಿತು ನಿರ್ಮಾಪಕ, ನಿರ್ದೇಶಕ ಗಿರೀಶ್‌ ನಾಗರಾಜ್‌, ‘ದೊಡ್ಡಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ಕೃಷ್ಣನ ವಿಗ್ರಹದ ದರ್ಶನ ಪಡೆದು ‘ಜಗದೋದ್ಧಾರನ ಆಡಿಸಿದಳೆಶೋದೆ’ ಪದ್ಯವನ್ನು ರಚಿಸಿದ ಐತಿಹಾಸಿಕ ಘಟನೆಯ ಮೂಲ ಚಿತ್ರಣ ಈ ಸಿನಿಮಾದ ಹೈಲೈಟ್‌. ಪುರಂದರ ದಾಸರ ಬದುಕಿನ ಚಿತ್ರಣ ಇದೆ. ಉಗಾಭೋಗಗಳನ್ನು ಕಥೆಗೆ ಪೂರಕವಾಗಿ ಹೆಣೆಯಲಾಗಿದೆ’ ಎಂದರು.ಉಡುಪಿಯ ಕೃಷ್ಣಮಠದಲ್ಲಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಟ್ರೇಲರ್‌ ಅನಾವರಣ ಮಾಡಿದ್ದಾರೆ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಸುಶೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ
ಪಾಕ್‌ನ ಚಿತ್ರಮಂದಿರದಲ್ಲಿ ಬ್ಯಾನ್‌ ಆಗಿದ್ದ ಧುರಂಧರ್‌, ನೆಟ್‌ಫ್ಲಿಕ್ಸ್‌ ಒಟಿಟೀಲಿ ನಂ.1