ಕನ್ನಡಪ್ರಭ ಸಿನಿವಾರ್ತೆ
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರುದ್ರಶಿವ, ‘ಇದೊಂದು ಮಾಸ್ ಆ್ಯಕ್ಷನ್ ಡ್ರಾಮಾ ಸಿನಿಮಾ. ‘ಹೊಡಿರೋ ಸೆಲ್ಯೂಟ್’ ಎಂಬ ಅಡಿಬರಹವಿದೆ. ಈ ಶೀರ್ಷಿಕೆಯ ಹಿನ್ನೆಲೆ ಸಿನಿಮಾದ ಕೊನೆಯಲ್ಲಿ ತೆರೆದುಕೊಳ್ಳುತ್ತದೆ. ಶಂಕರ್ ಮಹಾದೇವನ್, ಜೋಗಿ ಪ್ರೇಮ್ ಈ ಸಿನಿಮಾದ ಹಾಡಿಗೆ ದನಿಯಾಗಿದ್ದಾರೆ’ ಎಂದರು. ಪವೀಂದ್ರ ಮುತ್ತಪ್ಪ ಈ ಸಿನಿಮಾದ ನಿರ್ಮಾಪಕರು. ನಾಯಕ ಶರತ್ ನಾಲ್ಕು ವರ್ಷಗಳ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದರು. ನಾಯಕಿ ನಿಸರ್ಗ ಫ್ಯಾಷನ್ ಡಿಸೈನಿಂಗ್ ಹಿನ್ನೆಲೆಯವರು. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದೆಡೆ ಚಿತ್ರೀಕರಣ ನಡೆಯಲಿದೆ.