ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ಸಂಜು ವೆಡ್ಸ್ ಗೀತಾ 2 ಕತೆ ಕೊಟ್ಟಿದ್ದು ಸುದೀಪ್‌ : ನಾಗಶೇಖರ್‌

KannadaprabhaNewsNetwork |  
Published : Jan 03, 2025, 12:32 AM ISTUpdated : Jan 03, 2025, 05:06 AM IST
Sanju Weds Geetha 2

ಸಾರಾಂಶ

ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ಸಂಜು ವೆಡ್ಸ್ ಗೀತಾ 2 ಚಿತ್ರ ಜನವರಿ 10ಕ್ಕೆ ತೆರೆಗೆ ಬರುತ್ತಿದೆ.

ನನಗೆ ‘ಸಂಜು ವೆಡ್ಸ್‌ ಗೀತಾ 2’ ಚಿತ್ರಕ್ಕೆ ಪ್ರೇಮ ಕತೆಯ ಎಳೆಯನ್ನು ಕೊಟ್ಟಿದ್ದೇ ನಟ ಸುದೀಪ್‌ ಅವರು. ನಾನು ಇಂಥ ಕತೆಗಳನ್ನು ಚೆನ್ನಾಗಿ ಹ್ಯಾಂಡಲ್‌ ಮಾಡುತ್ತೇನೆಂದು ಮೆಚ್ಚಿಕೊಂಡು ಕತೆ ಕೊಟ್ಟರು.’

- ಹೀಗೆ ಹೇಳಿದ್ದು ನಿರ್ದೇಶಕ ನಾಗಶೇಖರ್‌. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ನಟನೆಯ, ಛಲವಾದಿ ಕುಮಾರ್‌ ನಿರ್ಮಾಣದ ‘ಸಂಜು ವೆಂಡ್ಸ್‌ ಗೀತಾ 2’ ಚಿತ್ರದ ಎರಡನೇ ಹಾಡನ್ನು ಸುದೀಪ್‌ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಾಗಶೇಖರ್‌, ‘ಜ.10ಕ್ಕೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಈ ಕತೆಯನ್ನು ಸುದೀಪ್‌ ನನಗೆ ಕೊಟ್ಟಿದ್ದು ‘ಮಾಣಿಕ್ಯ’ ಶೂಟಿಂಗ್‌ ಸಂದರ್ಭದಲ್ಲಿ. ಅವರು ಕೊಟ್ಟ ಪ್ರೇಮ ಕತೆಗೆ ಶಿಡ್ಲಘಟ್ಟದ ನೈಜ ಘಟನೆಗಳನ್ನು ಸೇರಿಸಿದ್ದೇನೆ’ ಎಂದರು.ನಿರ್ಮಾಪಕ ಛಲವಾದಿ ಕುಮಾರ್‌, ‘ನವಿರಾದ ಪ್ರೇಮದ ಜತೆ ರೈತರ ಕತೆಯನ್ನು ಒಳಗೊಂಡ ಈ ಚಿತ್ರವು ಡಾ ರಾಜ್‌ಕುಮಾರ್‌ ಅವರ ‘ಬಂಗಾರದ ಮನುಷ್ಯ’ ಚಿತ್ರವನ್ನು ನೆನಪಿಸುತ್ತದೆ’ ಎಂದರು. ಚೇತನ್‌ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್‌, ಸಂಪತ್‌ ಕುಮಾರ್‌ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌