‘ಭಕ್ತರು ಸರದಿ ಸಾಲು ಸೇರಿದ ಒಂದೇ ತಾಸಿನಲ್ಲಿ ತಿರುಮಲ ವೆಂಕಟೇಶ್ವರನ ದರ್ಶನ ಲಭಿಸುವಂತೆ ಮಾಡುವುದು ನಮ್ಮ ಗುರಿ’ ಎಂದು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ.
ತಿರುಮಲ: ‘ಭಕ್ತರು ಸರದಿ ಸಾಲು ಸೇರಿದ ಒಂದೇ ತಾಸಿನಲ್ಲಿ ತಿರುಮಲ ವೆಂಕಟೇಶ್ವರನ ದರ್ಶನ ಲಭಿಸುವಂತೆ ಮಾಡುವುದು ನಮ್ಮ ಗುರಿ’ ಎಂದು ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ.
ಮಾಧ್ಯಮ ಸಂದರ್ಶನ ನೀಡಿದ ಅವರು, ‘ನಮ್ಮ ಮಹತ್ವಾಕಾಂಕ್ಷೆಯ ಗುರಿ ಪ್ರತಿಯೊಬ್ಬ ಭಕ್ತನಿಗೆ ಒಂದು ಗಂಟೆಯೊಳಗೆ ವೆಂಕಟೇಶ್ವರನ ದರ್ಶನವನ್ನು ಒದಗಿಸುವುದು. ಇದನ್ನು ಸಾಧಿಸಲು, ನಾವು ವಿಮಾನ ನಿಲ್ದಾಣಗಳಲ್ಲಿ ಬಳಸುವ ಡಿಜಿ ಯಾತ್ರಾ ವ್ಯವಸ್ಥೆಯಿಂದ ಪ್ರೇರಿತವಾದ ಕೃತಕ ಬುದ್ಧಿಮತ್ತೆ-ಚಾಲಿತ (ಎಐ ಚಾಲಿತ) ಮುಖ ಗುರುತಿಸುವಿಕೆ ವ್ಯವಸ್ಥೆ ಪರಿಚಯಿಸುತ್ತಿದ್ದೇವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ದರ್ಶನಕ್ಕೆ ನಿರ್ದಿಷ್ಟ ಸಮಯದ ಸ್ಲಾಟ್ ಅನ್ನು ನಿಗದಿಪಡಿಸಲಾಗುತ್ತದೆ. ಅವರು ನಿಗದಿತ ಸಮಯದ 1 ಗಂಟೆಯೊಳಗೆ ಸರತಿ ಸಾಲಿನಲ್ಲಿ ಸೇರಬಹುದು ಮತ್ತು ಮುಂದಿನ 60 ನಿಮಿಷಗಳಲ್ಲಿ ದರ್ಶನ ಪಡೆಯುತ್ತಾರೆ’ ಎಂದರು.
ಈ ವಿನೂತನ ವ್ಯವಸ್ಥೆಯನ್ನು ಪ್ರಸ್ತುತ ಬೆಂಗಳೂರು ಮೂಲದ ಕಂಪನಿಯು ಡೆಮೋ ಮಾಡುತ್ತಿದೆ. ಉದಾರ ದಾನಿಗಳು ಪ್ರಾಯೋಜಿಸುತ್ತಿದ್ದಾರೆ ಎಂದು ನುಡಿದರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.