ಚಂಡೀಗಢ: ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆಮ್ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆಪ್ ಅಧಿಕಾರದಲ್ಲಿರುವ ಏಕೈಕ ರಾಜ್ಯ ಪಂಜಾಬ್ನಿಂದ ರಾಜ್ಯಸಭಾ ಹುದ್ದೆಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಗುಸುಗುಸು ಎದ್ದಿದೆ.
ಸದ್ಯ ದೆಹಲಿಯಲ್ಲೂ ಆಪ್ ಅಧಿಕಾರದಲ್ಲಿಲ್ಲ. ಇದ್ದ ಸಿಎಂ ಹುದ್ದೆ, ಸರ್ಕಾರ ಎರಡೂ ಕೇಜ್ರಿ ಕೈತಪ್ಪಿದೆ. ಮತ್ತೊಂದೆಡೆ ಹಲವು ಆರೋಪಗಳು ಬೆನ್ನಿಗೇರಿವೆ. ಹೀಗಾಗಿ ಸಂಸದರಾದರೆ ಸಿಗುವ ಒಂದಷ್ಟು ಸವಲತ್ತು ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಜ್ರಿವಾಲ್ ರಾಜ್ಯಸಭೆ ಪ್ರವೇಶ ಬಯಸಿದ್ದಾರೆ ಎನ್ನಲಾಗಿದೆ.
ಮದ್ಯ ಲೈಸೆನ್ಸ್ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಹಾಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.