ನಾನು ಎನ್‌ಡಿಎ ಕೂಟದಲ್ಲಿಯೇ ಉಳಿಯುತ್ತೇನೆ. ಎಲ್ಲಿಗೂ ಹೋಗಲ್ಲ : ಬಿಹಾರ ಸಿಎಂ ನಿತೀಶ್‌ ಕುಮಾರ್‌

KannadaprabhaNewsNetwork |  
Published : Jan 06, 2025, 01:00 AM ISTUpdated : Jan 06, 2025, 04:27 AM IST
nithish-kumar-20271.jpg

ಸಾರಾಂಶ

‘ನಾನು ಎನ್‌ಡಿಎ ಕೂಟದಲ್ಲಿಯೇ ಉಳಿಯುತ್ತೇನೆ. ಎಲ್ಲಿಗೂ ಹೋಗಲ್ಲ’ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಪಟನಾ: ‘ನಾನು ಎನ್‌ಡಿಎ ಕೂಟದಲ್ಲಿಯೇ ಉಳಿಯುತ್ತೇನೆ. ಎಲ್ಲಿಗೂ ಹೋಗಲ್ಲ’ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

‘ನಿತೀಶ್‌ ಇಂಡಿಯಾ ಕೂಟಕ್ಕೆ ಬರುವುದಿದ್ದರೆ ಸ್ವಾಗತ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ ಹೇಳಿಕೆಗೆ ಬಿಹಾರ ಸಿಎಂ ಪ್ರತಿಕ್ರಿಯಿಸಿ, ‘ನಾನು ಎನ್‌ಡಿಎ ಜೊತೆಗೆ ಉಳಿದುಕೊಳ್ಳುತ್ತೇನೆ. ನಾವು ಎರಡು ಸಲ ಆಕಸ್ಮಿಕವಾಗಿ ಅಲೆದಾಡಿದ್ದೇವೆ. ಮತ್ತೆ ಎಲ್ಲಿಗೂ ಹೋಗಲ್ಲ’ ಎಂದಿದ್ದಾರೆ.ಮೊನ್ನೆ ಲಾಲು ಅವವರು ‘ನಿತೀಶ್ ಇಂಡಿಯಾ ಕೂಟಕ್ಕೆ ಮರಳುವುದಾದರೆ ಅವರನ್ನು ಕ್ಷಮಿಸಿ, ಸ್ವಾಗತಿಸಿಕೊಳ್ಳುತ್ತೇವೆ. ನಮ್ಮ ಬಾಗಿಲು ಮುಕ್ತವಾಗಿದೆ. ನಿತೀಶ್‌ ತಮ್ಮ ಗೇಟ್‌ ತೆರೆಯಬೇಕು. ಅವರ ಹಳೆಯ ತಪ್ಪುಗಳನ್ನು ಕ್ಷಮಿಸುವುದು ನನ್ನ ಕರ್ತವ್ಯ’ ಎಂದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಪರೇಷನ್‌ ಸಿಂದೂರ 1ನೇ ದಿನವೇ ಭಾರತ ಸೋತಿತು: ಚವಾಣ್‌
ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌