ರಾಜ್ಯದ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಮೊದಲಿಗೆ ನಾಡಗೀತೆಯಾದ ತಮಿಳ್‌ ತಾಯ್‌ ವಳ್ತು ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್‌ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

ಚೆನ್ನೈ: ರಾಜ್ಯದ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಮೊದಲಿಗೆ ನಾಡಗೀತೆಯಾದ ತಮಿಳ್‌ ತಾಯ್‌ ವಳ್ತು ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಿಎಂ ವಿಜಯ್‌ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.

1970ರಲ್ಲಿ ಸರ್ಕಾರ ಆದೇಶ

ಈ ಗೀತೆಯನ್ನು ಎಲ್ಲಾ ಸಮಾರಂಭಗಳ ಆರಂಭದಲ್ಲಿ ಹಾಡಬೇಕೆಂದು 1970ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು.

ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ

ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ನಿರ್ಣಯ ಮಂಡಿಸಲಾಗುತ್ತಿದೆ. 2021ರ ಡಿ.21ರಂದು ಇದನ್ನು ಅಧಿಕೃತವಾಗಿ ತಮಿಳುನಾಡಿನ ನಾಡಗೀತೆ ಎಂದು ಗುರುತಿಸಲಾಗಿತ್ತು.