ಹಿಮಾಚಲ ದೇಗುಲದಲ್ಲಿ ಶಿವರಾತ್ರಿ ದಿನ ದಾಂಪತ್ಯಕ್ಕೆಸನಾತನ ಕೇಂದ್ರಿತ ವಿವಿ ಸ್ಥಾಪನೆಗೆ ದಂಪತಿ ಚಿಂತನೆಶಿಮ್ಲಾ: ಕಳೆದ ವರ್ಷ ಮಹಾಕುಂಭ ಮೇಳದಲ್ಲಿ ‘ಐಐಟಿ ಬಾಬಾ’ ಎಂದೇ ವೈರಲ್ ಆದ ಅಭಯ್ ಸಿಂಗ್ ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರೊಂದಿಗೆ ವಿವಾಹವಾಗಿದ್ದಾರೆ. ಫೆ.15ರಂದು ಮಹಾಶಿವರಾತ್ರಿ ದಿನ ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಹರಿಯಾಣದ ಝಜ್ಜರ್ನವರಾದ ಅಭಯ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದು ಕೆನಡಾದಲ್ಲಿ ತಿಂಗಳಿಗೆ 3 ಲಕ್ಷ ರು. ಸಂಬಳದ ಉದ್ಯೋಗದಲ್ಲಿದ್ದರು. ಆದರೆ ಜೀವನದಲ್ಲಿ ಏನೋ ಕೊರತೆಯಿದೆ ಎನಿಸಿ ಉದ್ಯೋಗವನ್ನು ಬಿಟ್ಟು ಆಧ್ಯಾತ್ಮಿಕ ಜೀವನಕ್ಕೆ ತಿರುಗಿದರು. ಮಹಾಕುಂಭದಲ್ಲಿ ಅವರ ಸಂದರ್ಶನ ವೈರಲ್ ಆಗಿ ‘ಐಐಟಿ ಬಾಬಾ’ ಎಂದು ಪ್ರಸಿದ್ಧರಾದರು.
==ಕೇರಳದ ದೇಗುಲಗಳಿಗೆ ಅನಂತ್ 18 ಕೋಟಿ ರು. ದೇಣಿಗೆ
==
ನವದೆಹಲಿ: ಪ್ರತಿಷ್ಠಿತ ನ್ಯಾಸ್ಕಾಂ ಫೌಂಡೇಶನ್ನ ಅಧ್ಯಕ್ಷರಾಗಿ ಕನ್ನಡಿಗ ಯುಬಿ ಪ್ರವೀಣ್ ರಾವ್ ನೇಮಕಗೊಂಡಿದ್ದಾರೆ. ಈ ಬಗ್ಗೆ ನ್ಯಾಸ್ಕಾಂ ಫೌಂಡೇಶನ್ ಖಚಿತ ಪಡಿಸಿದೆ. ಲಾಭರಹಿತ ಸಂಸ್ಥೆಯಾಗಿರುವ ನ್ಯಾಸ್ಕಾಂನ ಹಿಂದಿನ ಅಧ್ಯಕ್ಷರಾಗಿದ್ದ ರೋಸ್ಟೋ ರಾವಣನ್ ಅಧಿಕಾರವಧಿ ಮುಕ್ತಾಯ ಹಿನ್ನೆಲೆ ಪ್ರವೀಣ್ ಅವರ ಆಯ್ಕೆಯಾಗಿದೆ. 35 ವರ್ಷಗಳ ಅನುಭವ ಹೊಂದಿರುವ ಅವರು ಈ ಹಿಂದೆ ನ್ಯಾಸ್ಕಾಂನ ಛೇರ್ಮನ್ ಮತ್ತು ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ.
ಭಾರತಕ್ಕೆ ಅಕ್ರಮ ಪ್ರವೇಶ: ಉಡುಪಿ ಮಹಿಳೆಗೆ 6 ತಿಂಗಳು ಜೈಲು
ಸೂಕ್ತ ದಾಖಲೆಗಳಿಲ್ಲದೆ ನೇಪಾಳ ಗಡಿ ದಾಟಿ ಭಾರತಕ್ಕೆ ಬರುತ್ತಿದ್ದ ಕರ್ನಾಟಕದ ಉಡುಪಿ ಮೂಲದ(ಬಳಿಕ ಬ್ರಿಟನ್ ಪೌರತ್ವ ಪಡೆದ) ಸುಮಿತ್ರಾ ಶಕೀಲ್ ಒಲಿವಿಯಾ ಮತ್ತು ಪಾಕಿಸ್ತಾನ ಮೂಲದ ಹಸನ್ ಅಮ್ಮನ್ ಸಲೀಂನನ್ನು ಕಳೆದ ನವೆಂಬರ್ನಲ್ಲಿ ಬಂಧಿಸಲಾಗಿತ್ತು.
==
ವಂದೇ ಭಾರತ್ ಆಹಾರದಲ್ಲಿ ಹುಳು: ಮಾರಾಟಗಾರರಿಗೆ ₹10 ಲಕ್ಷ ದಂಡಮುಂಬೈ: ಅಹಮದಾಬಾದ್ನಿಂದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿಯೊಬ್ಬರಿಗೆ ರೈಲಿನಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ ರೀತಿಯ ಹುಳು ಪತ್ತೆಯಾಗಿದೆ. ಈ ಬೆನ್ನಲ್ಲೇ ಐಆರ್ಸಿಟಿಸಿ, ಆಹಾರ ಮಾರಾಟಗಾರ ಕಂಪನಿ ಆರ್.ಕೆ. ಗ್ರೂಪ್ಗೆ 10 ಲಕ್ಷ ರು. ದಂಡ ವಿಧಿಸಿದೆ.ಪ್ರಯಾಣಿಕ ತಮ್ಮ ಎಕ್ಸ್ ಖಾತೆಯಲ್ಲಿ ದಾಲ್- ಚಾವಲ್ ಊಟದಲ್ಲಿ ಕೀಟಗಳಿರುವುದನ್ನು ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೋಚ್ನಲ್ಲಿ ಎರಡು ಕಡೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದಿದ್ದಾರೆ. ‘ಆರ್ಕೆ ಗ್ರೂಪ್ನ ಬೃಂದಾವನ ಫುಡ್ ಪ್ರಾಡಕ್ಟ್ಸ್ ಆಹಾರ ನೀಡಿದ್ದು, ಅವರ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.ವಿಡಿಯೋದಲ್ಲಿ ಅವರು, ‘ಎಫ್ಎಸ್ಎಸ್ಎಐ ಮಾನದಂಡಗಳ ಪ್ರಕಾರ ಆಹಾರವನ್ನು ತಯಾರಿಸುತ್ತಿಲ್ಲ ಎಂದು ನನಗೆ ಖಚಿತವಾಗಿದೆ. ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಇದು ಲಂಚದ ಮೂಲಕ ಇತ್ಯರ್ಥವಾಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.ಈ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ)ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಅಹಾರ ಪೂರೈಸಿದವರಿಗೆ 10 ಲಕ್ಷ ರುಪಾಯಿಗಳ ಭಾರೀ ದಂಡ ಮತ್ತು ಒಪ್ಪಂದ ಮುಕ್ತಾಯದ ಸೂಚನೆ ನೀಡಲಾಗಿದೆ. ಅಡುಗೆ ಮನೆಯನ್ನು ಸೀಲ್ ಮಾಡಲಾಗಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ’ ಎಂದಿದೆ.ಕಳೆದ ತಿಂಗಳು ಪಟನಾದಿಂದ ಟಾಟಾ ನಗರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು