ಆಕಸ್ಮಿಕವಾಗಿ ಸಿಡಿದ ಗನ್‌: ಗೋವಿಂದ ಕಾಲಿಗೆ ಗುಂಡು

KannadaprabhaNewsNetwork |  
Published : Oct 02, 2024, 01:20 AM IST
ಗೋವಿಂದ | Kannada Prabha

ಸಾರಾಂಶ

ರಿವಾಲ್ವರ್‌ನಿಂದ ಆಕಸ್ಮಿವಾಗಿ ಸಿಡಿದ ಗುಂಡು ನಟ ಗೋವಿಂದ ಕಾಲಿಗೆ ತಗುಲಿ ಅವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕಾಲಿಗೆ ಹೊಕ್ಕಿದ್ದ ಗುಂಡು ಹೊರತೆಗೆದಿದ್ದು, ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ.

ಮುಂಬೈ: ರಿವಾಲ್ವರ್‌ನಿಂದ ಆಕಸ್ಮಿವಾಗಿ ಸಿಡಿದ ಗುಂಡು ನಟ ಗೋವಿಂದ ಕಾಲಿಗೆ ತಗುಲಿ ಅವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕಾಲಿಗೆ ಹೊಕ್ಕಿದ್ದ ಗುಂಡು ಹೊರತೆಗೆದಿದ್ದು, ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ.

ಕೋಲ್ಕತಾದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದ ಗೋವಿಂದ, ತಮ್ಮ ರಿವಾಲ್ವರ್‌ ಅನ್ನು ಕಪಾಟಿನಲ್ಲಿ ಇಡುವಾಗ ಅದರ ಟ್ರಿಗರ್‌ ಒತ್ತಿದಂತಾಗಿ ಗುಂಡು ಹಾರಿತ್ತು. ಅದು ಅವರ ಕಾಲಿಗೆ ತಗುಲಿತು ಎಂದು ಅವರ ಮ್ಯಾನೇಜರ್‌ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲವಾದರೂ ತನಿಖೆ ಆರಂಭಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ಸಂಬಂಧ ಅಭಿಮಾನಿಗಳಿಗೆ ಆಡಿಯೋ ಸಂದೇಶ ಕಳಿಸಿರುವ ಗೋವಿಂದ, ‘ಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನನಗೆ ತಗುಲಿದ್ದ ಗುಂಡು ತೆಗೆಯಲಾಗಿದೆ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!