ಆಂಧ್ರದಲ್ಲಿ ಹೈವೇಯಲ್ಲೇ ಯುದ್ಧವಿಮಾನ ಇಳಿಸಲು ಏರ್‌ಸ್ಟ್ರಿಪ್‌

KannadaprabhaNewsNetwork |  
Published : Mar 20, 2024, 01:22 AM ISTUpdated : Mar 20, 2024, 12:33 PM IST
ಭಾರತೀಯ ವಾಯುಪಡೆ | Kannada Prabha

ಸಾರಾಂಶ

ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ.

ನವದೆಹಲಿ: ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ. 

ಯುದ್ಧ ಅಥವಾ ಪ್ರಾಕೃತಿಕ ವಿಕೋಪಗಳಂಥ ತುರ್ತು ಕಾಲದಲ್ಲಿ ಇಲ್ಲಿ ಹೆದ್ದಾರಿಯಲ್ಲೇ ಯುದ್ಧವಿಮಾನಗಳನ್ನು ಇಳಿಸಿ, ಅಗತ್ಯ ಕ್ರಮ ಕ್ರಮ ಜರುಗಿಸಲು ಇದು ನೆರವಾಗಲಿದೆ.

ಮಾ.18ರಂದು ಇಲ್ಲಿ ಸುಖೋಯ್‌-30 ಹಾಗೂ ಹಾಕ್‌ ಯುದ್ಧವಿಮಾನ ಇಳಿಸಿ ಏರ್‌ಸ್ಟ್ರಿಪ್‌ಗೆ ಚಾಲನೆ ನೀಡಲಾಯಿತು ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

33 ಮೀ. ಅಗಕ ಇರುವ ಹಾಗೂ 4.1 ಕಿ.ಮೀ. ಉದ್ದದ ಕಾಂಕ್ರೀಟ್ ಏರ್‌ಸ್ಟ್ರಿಪ್ ಇದಾಗಿದೆ. ಭಾರತೀಯ ವಾಯುಪಡೆ ನೀಡಿದ ಸಲಹೆಗಳನ್ನು ಆಧರಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ರಾಷ್ಟ್ರೀಯ ಹೆದ್ದಾರಿ-16ರಲ್ಲಿ ನಿರ್ಮಿಸಿದೆ.

ಇಂಥ ಹಲವು ಏರ್‌ಸ್ಟ್ರಿಪ್‌ಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಆಂಧ್ರಪ್ರದೇಶದಲ್ಲಿ ಇದು ಇದೇ ಮೊದಲ ಏರ್‌ಸ್ಟ್ರಿಪ್‌ ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ