ಮುಂಬೈ ರನ್‌ವೇಲೆ ಇಂಡಿಗೋ, ಏರಿಂಡಿಯಾ ವಿಮಾನಗಳ ಡಿಕ್ಕಿ

KannadaprabhaNewsNetwork |  
Published : Feb 04, 2026, 02:00 AM IST
ಡಿಕ್ಕಿ | Kannada Prabha

ಸಾರಾಂಶ

ಇಲ್ಲಿನ ಛತ್ರಪತಿ ಶೀವಾಜಿ ಮಹಾರಾಜ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ವಿಮಾನಗಳು ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೊಯಮತ್ತೂರಿಗೆ ಹೊರಟಿದ್ದ ಏರ್‌ ಇಂಡಿಯಾ ಮತ್ತು ಹೈದರಾಬಾದ್‌ನಿಂದ ಬಂದಿಳಿಯುತ್ತಿದ್ದ ಇಂಡಿಗೋ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿವೆ.

ಮುಂಬೈ: ಇಲ್ಲಿನ ಛತ್ರಪತಿ ಶೀವಾಜಿ ಮಹಾರಾಜ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ವಿಮಾನಗಳು ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೊಯಮತ್ತೂರಿಗೆ ಹೊರಟಿದ್ದ ಏರ್‌ ಇಂಡಿಯಾ ಮತ್ತು ಹೈದರಾಬಾದ್‌ನಿಂದ ಬಂದಿಳಿಯುತ್ತಿದ್ದ ಇಂಡಿಗೋ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿವೆ.

ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು

ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು. ಘಟನೆ ಬಗ್ಗೆ ಏರ್‌ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಯಾರಿಗೂ ಹಾನಿಯಾಗಿಲ್ಲ. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ. ವಿಮಾನಗಳಲ್ಲಿ ಇಂಧನ ತುಂಬಿರುವುದು ರೆಕ್ಕೆಗಳಲ್ಲೇ ಎಂಬುದು ಗಮನಾರ್ಹ.

ಏರಿಂಡಿಯಾದ ಎಲ್ಲಾ 33 ಡ್ರೀಮ್‌ಲೈನರ್‌ ಇಂಧನ ಸ್ವಿಚ್‌ ಮರು ತಪಾಸಣೆ

ನವದೆಹಲಿ: ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ಬೋಯಿಂಗ್‌ 787 ವಿಮಾನದ ಇಂಧನ ಸ್ವಿಚ್‌ನಲ್ಲಿ ಸೋಮವಾರ ತಾಂತ್ರಿಕ ದೋಷ ವರದಿ ಬೆನ್ನಲ್ಲೇ ಏರಿಂಡಿಯಾ ತನ್ನಲ್ಲಿರುವ ಎಲ್ಲಾ 33 ಡ್ರೀಮ್‌ಲೈನರ್‌ ವಿಮಾನಗಳ ಫ್ಯೂಯಲ್‌ ಸ್ವಿಚ್‌ ತಪಾಸಣೆಗೆ ಮುಂದಾಗಿದೆ. ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬೋಯಿಂಗ್‌ ವಿಮಾನದಲ್ಲಿ ಫ್ಯೂಯಲ್‌ ಸ್ವಿಚ್‌ ಅನ್ನು ರನ್‌ ಮೋಡ್‌ಗೆ ಹಾಕಿದರೂ ಅದು ಆಫ್‌ ಆಗುತ್ತಿತ್ತು. ಇದು ಅಪಘಾತಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಬೆಳವಣಿಗೆ. ಆದರೆ ವಿಮಾನದಲ್ಲಿನ ಎರಡು ಎಂಜಿನ್‌ಗಳ ಪೈಕಿ ಒಂದರ ಸ್ವಿಚ್‌ ಮಾತ್ರ ಹೀಗಾದ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ವಿಮಾನ ಸಂಚಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಉಳಿದ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ಮರುಪರಿಶೀಲನೆ ಆರಂಭಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ