ಆಂಧ್ರ ಮಾಜಿ ಸಿಎಂ ಜಗನ್‌ ಕಾರು ಹರಿದು ಬೆಂಬಲಿಗ ಬಲಿ

KannadaprabhaNewsNetwork |  
Published : Jun 22, 2025, 11:48 PM ISTUpdated : Jun 23, 2025, 04:03 AM IST
ಜಗನ್  | Kannada Prabha

ಸಾರಾಂಶ

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿದ್ದ ಕಾರು ಹರಿದು ಪಕ್ಷದ ಬೆಂಬಲಿಗ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

 ಗುಂಟೂರು: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿದ್ದ ಕಾರು ಹರಿದು ಪಕ್ಷದ ಬೆಂಬಲಿಗ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. 

ಮೃತ ಸಿಂಘಯ್ಯ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಬೆಂಬಲಿಗರಾಗಿದ್ದು, ಭಾನುವಾರ ಗುಂಟೂರು ಜಿಲ್ಲೆಯ ರೆಂಟಪಲ್ಲಿ ಎಂಬಲ್ಲಿ ಜಗನ್‌ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದರು. 

ಜಗನ್‌ ಅವರು ಕಾರಿನ ಕಿಟಕಿಯಿಂದ ಹೊರಬಂದು ನೆರೆದಿರುವವರತ್ತ ಕೈ ಬೀಸಿ ಹಸ್ತಾಲಾಘವ ಮಾಡುತ್ತಿದ್ದರು. ಈ ವೇಳೆ ಕಾರಿನ ಚಾಲಕನ ಬದಿಯಲ್ಲಿ ಸಿಂಘಯ್ಯ ಆಯತಪ್ಪಿ ಕಾರಿನ ಕೆಳಗೆ ಬಿದ್ದಿದ್ದಾರೆ. 

ಸಿಂಘಯ್ಯ ಬಿದ್ದಿರುವುದನ್ನು ಗಮನಿಸದ ಚಾಲಕ ಕುತ್ತಿಗೆ ಮತ್ತು ತಲೆ ಮೇಲೆಯೇ ಕಾರನ್ನು ಚಲಾಯಿಸಿದ್ದಾನೆ. ಇದರಿಂದಾಗಿ ಸಿಂಘಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ