ಖ್ವಾಜಾ ಬೆದರಿಕೆಗೆ ಮೋದಿ ಮೌನವೇಕೆ?
ಅಲ್ಪಸಂಖ್ಯಾತರ ಮತ ಸೆಳೆವ ತಂತ್ರ: ಬಿಜೆಪಿ
ನವದೆಹಲಿ: ‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ.ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೀದಿ ನೇತೃತ್ವದ ರಾಜ್ಯಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ‘ಅಲ್ಪಸಂಖ್ಯಾತರ ಮತ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದೆ.
ಮಮತಾರ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿದ್ದು, ‘ಮತಬ್ಯಾಂಕ್ಗಾಗಿ ದೀದಿ, ಹಿಂದೂಗಳನ್ನು ಬಲಿ ಪಡೆದ ಕ್ರೂರ ಪಹಲ್ಗಾಂ ಉಗ್ರದಾಳಿಯನ್ನು ಯೋಜಿತ ಎಂದು ಕರೆಯುತ್ತಿದ್ದಾರೆ. ಅವರು ಹಿಂದೂ ವಿರೋಧಿ’ ಎಂದು ತಿವಿದಿದ್ದಾರೆ.‘ಪಹಲ್ಗಾಂ ದಾಳಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತೆ ಉಗ್ರದಾಳಿಯ ನೆಪ ಹೇಳಿ ನಮ್ಮ ಮೇಲೆ ನಕಲಿ ಕಾರ್ಯಾಚರಣೆ ಕೈಗೊಳ್ಳಬಹುದು. ಹಾಗೇನಾದರೂ ಮಾಡಿದರೆ ನಾವು ಕೋಲ್ಕತಾವನ್ನು ಗುರಿಯಾಗಿಸಿ ಆಕ್ರಮಣ ಮಾಡುತ್ತೇವೆ’ ಎಂದು ಖ್ವಾಜಾ ನಾಲಗೆ ಹರಿಬಿಟ್ಟಿದ್ದರು.