ಉತ್ತರಾ ಖಂಡ : ಸುಟ್ಟ ಸ್ಥಿತಿಯಲ್ಲಿ ಬೆಂಗಳೂರು ನೋಂದಣಿ ಹೊಂದಿರುವ ಕಾರು, ಶವ ಪತ್ತೆ

KannadaprabhaNewsNetwork |  
Published : Apr 07, 2025, 01:33 AM ISTUpdated : Apr 07, 2025, 05:12 AM IST
ಬೆಂಗಳೂರಿನ ಕಾರು | Kannada Prabha

ಸಾರಾಂಶ

ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ರಿಟ್ಜ್‌ ಕಾರು ಉತ್ತರಾಖಂಡದ ಜ್ಯೋತಿರ್ಮಠದ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಒಳಗೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವೂ ಲಭಿಸಿದ್ದು, ಘಟನೆ ಶನಿವಾರ ರಾತ್ರಿ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

 ಚಮೋಲಿ (ಉತ್ತರಾಖಂಡ): ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ರಿಟ್ಜ್‌ ಕಾರು ಉತ್ತರಾಖಂಡದ ಜ್ಯೋತಿರ್ಮಠದ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಒಳಗೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವೂ ಲಭಿಸಿದ್ದು, ಘಟನೆ ಶನಿವಾರ ರಾತ್ರಿ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ತಪೋವನ್‌ ಎಂಬ ಗ್ರಾಮದಲ್ಲಿ ಸುಟ್ಟ ಸ್ಥಿತಿಯಲ್ಲಿನ ಕಾರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಪರಿಶೀಲಿಸಿದಾಗ, ಮಹಿಳೆಯ ಮೃತದೇಹ ಪತ್ತೆಯಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರಿಶೀಲನೆ ವೇಳೆ ಕಾರು ಬೆಂಗಳೂರು ನೋಂದಣಿ (KA 01 AG 0590) ಎಂದು ತಿಳಿದುಬಂದಿದೆ. ಕಾರು ಸಂತೋಶ್‌ ಕುಮಾರ್‌ ಸೇನಾಪತಿ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿದ್ದು, ಇವರು ಬೆಂಗಳೂರಿನ ಕಸ್ತೂರಿ ನಗರ ಸಮೀಪ ಕೃಷ್ಣಯ್ಯನಪಾಳ್ಯದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಈ ಕಾರು ಕಳೆದೆರಡು ದಿನಗಳಿಂದ ಜ್ಯೋತಿರ್ಮಠ ಸಮೀಪ ತಿರುಗಾಡುತ್ತಿತ್ತು. ಕಾರಿನಲ್ಲಿ ಯುವಕ ಮತ್ತು ಮಹಿಳೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಯುವಕನ ಮಾಹಿತಿ ಇನ್ನು ಪತ್ತೆಯಾಗಬೇಕಿದೆ.

ಹೆಚ್ಚಿನ ತನಿಖೆಗಾಗಿ ಉನ್ನತ ಮಟ್ಟದ ತಂಡ ರಚಿಸಲಾಗಿದ್ದು, ಕಾರನ್ನು ವಿಧಿವಿಜ್ಞಾನ ತಜ್ಞರು ತನಿಖೆ ನಡೆಸುತ್ತಿದ್ದಾರೆ ಎಂದು ಚಮೋಲಿ ಎಸ್‌ಪಿ ಸರ್ವೇಶ್‌ ಪನ್ವರ್‌ ತಿಳಿಸಿದ್ದಾರೆ. ಇದು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ