ಮುಂಬೈ: 1993ರಲ್ಲಿ ಪ್ರಸಾರವಾದ ಬನೇಗಿ ಅಪ್ನಿ ಬಾತ್ ದೂರದರ್ಶನ ಕಾರ್ಯಕ್ರಮದ ಮೂಲಕ ಮನ್ನಣೆ ಗಳಿಸಿದ್ದ ಖ್ಯಾತ ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯ ಬಾಲಿವುಡ್ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದಾಗಿ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಉದರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚೇತರಿಸಿಕೊಂಡ ಕಾರಣ ಕೆಲವೇ ದಿನಗಳ ಮೊದಲು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಅವರು ರಂಗಭೂಮಿಯ ಮೂಲಕ ನಟನಾರಂಗ ಪ್ರವೇಶಿಸಿ ಅನುಪಮಾ, ಹಿಟ್ಲರ್ ದೀದಿ, ಶಪಥ್ ಮುಂತಾದ ಧಾರಾವಾಹಿಗಳಲ್ಲಿ ಕಿರುತೆರೆಯಲ್ಲಿ ನಟಿಸುವ ಜೊತೆಗೆ ಶಾರುಖ್ ಖಾನ್, ವರುಣ್ ಧವನ್ ಜತೆಗೂ ಸಹನಟನಾಗಿ ಅಭಿನಯ ಮಾಡಿದ್ದರು. ಇವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.