ಮಾಯಾವತಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಆನಂದ್ ಶರ್ಮಾ ಅವರನ್ನು ಅಪ್ರಬುದ್ಧ ಎಂಬ ಕಾರಣ ನೀಡಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ಲಖನೌ: ಬಿಎಸ್ಪಿಯಲ್ಲಿ ಮಂಗಳವಾರ ಮಹತ್ವದ ವಿದ್ಯಮಾನ ನಡೆದಿದ್ದು, ಪಕ್ಷದ ಅಧಿನಾಯಕಿ ಮಾಯಾವತಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತ ಆಗಿದ್ದ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ‘ಬಿಡುಗಡೆ’ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಯಾವತಿ, ‘ಆಕಾಶ್ ಆನಂದ್ ಸಂಪೂರ್ಣ ರಾಜಕೀಯ ಪ್ರಬುದ್ಧತೆ ಪಡೆಯುವವರೆಗೆ ಪಕ್ಷದ ಪ್ರಮುಖ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಆದರೆ ಅವರ ತಂದೆ ಆನಂದಕುಮಾರ್ ಅವರು ಪ್ರಮುಖ ಹೊಣೆಗಾರಿಕೆ ಮುಂದುವರಿಸುತ್ತಾರೆ ಎಂದು ಮಾಯಾ ಸ್ಪಷ್ಟಪಡಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.