ಬ್ರಹ್ಮಪುತ್ರಾ ನದಿಯಡಿ ದೇಶದ ಮೊದಲ ಅವಳಿ ಸುರಂಗ ಮಾರ್ಗ

KannadaprabhaNewsNetwork |  
Published : Feb 15, 2026, 03:00 AM IST
ಕಾರ್ಯಕ್ರಮದಲ್ಲಿ ಶ್ರೀಧರ ಗಸ್ತಿ ಅವರ ‘ದಿ ಕಪ್‌ಟಿರ್ಚ್ಡ್ ಬೈ ದೇವಮ್ಮ’ ಹಾಗೂ ‘ಎಳೆಬಾಳೆ ಸುಳಿ ನಾನವ್ವ’ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ದೇಶದ ಮೊದಲ ರಸ್ತೆ-ರೈಲು ಸುರಂಗ ಮಾರ್ಗಕ್ಕೆ (ಅವಳಿ ಸುರಂಗ ಮಾರ್ಗ) ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಮಾರ್ಗ ಅಸ್ಸಾಂನ ಗೋಹ್ಪುರ್‌-ನುಮಲಿಗಢ್‌ ನಡುವೆ ಬ್ರಹ್ಮಪುತ್ರಾ ನದಿಯಡಿ ವಾಹನಗಳು ಹಾಗೂ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ ಹಾಗೂ ನೀರೊಳಗಿನ 35 ಕಿ.ಮೀ.ನಷ್ಟು ದೂರದವರೆಗೆ ನಿರ್ಮಾಣವಾಗಲಿದೆ.

ನದಿಯಡಿ 34 ಕಿ.ಮೀ. ದೂರ ರಸ್ತೆ-ರೈಲು ಮಾರ್ಗಗಳು

ಅಸ್ಸಾಂನ ಗೋಹ್ಪುರ್‌-ನುಮಲಿಗಢ್‌ ನಡುವೆ ನಿರ್ಮಾಣ

6 ಗಂಟೆಯ ಪ್ರಯಾಣದ ಅವಧಿ 20 ನಿಮಿಷಕ್ಕೆ ಇಳಿಕೆ

18,662 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಅಸ್ತುಪಿಟಿಐ ನವದೆಹಲಿ

ದೇಶದ ಮೊದಲ ರಸ್ತೆ-ರೈಲು ಸುರಂಗ ಮಾರ್ಗಕ್ಕೆ (ಅವಳಿ ಸುರಂಗ ಮಾರ್ಗ) ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಮಾರ್ಗ ಅಸ್ಸಾಂನ ಗೋಹ್ಪುರ್‌-ನುಮಲಿಗಢ್‌ ನಡುವೆ ಬ್ರಹ್ಮಪುತ್ರಾ ನದಿಯಡಿ ವಾಹನಗಳು ಹಾಗೂ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ ಹಾಗೂ ನೀರೊಳಗಿನ 35 ಕಿ.ಮೀ.ನಷ್ಟು ದೂರದವರೆಗೆ ನಿರ್ಮಾಣವಾಗಲಿದೆ.

ಒಟ್ಟು 18,662 ಕೋಟಿ ರು. ವೆಚ್ಚದ ಈ ಯೋಜನೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದು ರೈಲು ಮತ್ತು ವಾಹನ ಸಾರಿಗೆಗೆ ಅವಕಾಶ ನೀಡುವ ದೇಶದ ಮೊದಲ ಮತ್ತು ವಿಶ್ವದ ಎರಡನೇ ನೀರೊಳಗಿನ ಅತೀ ಉದ್ದದ ಅವಳಿ ಸುರಂಗ ಮಾರ್ಗವಾಗಿದೆ.

ಈಗಾಗಲೇ ದೇಶದ ಮೊದಲ ನೀರಡಿಯ ಸುರಂಗ ಮಾರ್ಗವನ್ನು ಮೆಟ್ರೋ ರೈಲು ಮಾರ್ಗಕ್ಕಾಗಿ ಕೋಲ್ಕತಾದಲ್ಲಿ ಹೂಂಗ್ಲಿ ನದಿಯಡಿ ನಿರ್ಮಿಸಲಾಗುತ್ತಿದೆ. ದೇಶದ ಮೊದಲ ಸಮುದ್ರದಡಿಯ ಸುರಂಗ ಮಾರ್ಗವನ್ನು ಅಹಮದಾಬಾದ್‌-ಮುಂಬೈ ನಡುವಿನ ಸಂಚಾರಕ್ಕಾಗಿ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಆದರೆ ಬ್ರಹ್ಮಪುತ್ರಾ ನದಿಯಲ್ಲಿ ರಸ್ತೆ ಹಾಗೂ ರೈಲಿಗಾಗಿ ಸುರಂಗ ಮಾರ್ಗ ನಿರ್ಮಿತವಾಗಲಿದ್ದು, ಒಟ್ಟಿಗೇ ನಿರ್ಮಾಣ ಆಗುತ್ತಿರುವುದು ಇದೇ ಮೊದಲು.

ಅಂತರ ಭಾರಿ ಇಳಿಕೆ:

ಸದ್ಯ ನುಮಲಿಗಢ್‌-ಗೋಹ್ಪುರ್‌ ಅನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಪರ್ಕಿಸುವ ಅಂತರವು 240 ಕಿ.ಮೀ. ಆಗಿದೆ. ಈ ಮಾರ್ಗವು ಎನ್‌ಎಚ್‌-52ನಲ್ಲಿನ ಸಿಲಾಘಾಟ್‌ ಸಮೀಪದ ಕಲಿಯಂಬೋಮೋರಾ ಸೇತುವೆ ಮೂಲಕ ಹಾದು ಹೋಗುತ್ತದೆ. ಇದಕ್ಕಾಗಿ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ನುಮಾಲಿಗಢ್‌ ತಲುಪಲು ಕಾಝಿರಂಗ ರಾಷ್ಟ್ರೀಯ ಉದ್ಯಾನ ಮತ್ತು ವಿಶ್ವನಾಥ ನಗರ ಮೂಲಕಹಾದು ಹೋಗಬೇಕಾಗುತ್ತದೆ. ಇದೀಗ ಪ್ರಸ್ತಾವಿತ ಹೊಸ ಸುರಂಗ ಮಾರ್ಗದಿಂದ ಈ ಅಂತರ 20 ನಿಮಿಷಕ್ಕೆ ಇಳಿಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ಮತ್ತಿತರ ಈಶಾನ್ಯ ರಾಜ್ಯಗಳ ನಡುವೆ ಸರಕು ಸಾಗಣೆ ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಈಶಾನ್ಯ ರಾಜ್ಯಗಳನ್ನು ದೇಶದ ಪ್ರಮುಖ ನಗರಗಳ ಜತೆಗೆ ಸಂಪರ್ಕಿಸುವಲ್ಲಿ ಈ ಸುರಂಗ ಮಾರ್ಗ ಮಹತ್ವದ ಪಾತ್ರವಹಿಸಲಿದೆ. ಈ ಯೋಜನೆ ಮೂಲಕ 80 ಲಕ್ಷ ಮಾನವ ದಿನಗಳ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದು ಸರ್ಕಾರ ತಿಳಿಸಿದೆ.==ವಿಶೇಷತೆ ಏನು?:

ಈ ಯೋಜನೆಯು 33.7 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಮಾರ್ಗವನ್ನು ಒಳಗೊಂಡಿದ್ದು, ಸುರಂಗ ಮಾರ್ಗವು ಬ್ರಹ್ಮಪುತ್ರ ನದಿಯಡಿ ಹಾದುಹೋಗಲಿದೆ. 2021ರಲ್ಲಿ ಪ್ರಸ್ತಾಪಿಸಲಾದ ಈ ಯೋಜನೆಗೆ ಈಗ ಅನುಮೋದನೆ ಸಿಕ್ಕಿದೆ. ಈ ಯೋಜನೆ ಮೂಲಕ ಗೋಹ್ಪುರ್‌-ನುಮಾಲಿಗಢ್‌ ನಡುವಿನ ಅಂತರವು 240 ಕಿ.ಮೀ.ನಿಂದ 34 ಕಿ.ಮೀ.ಗೆ ಇಳಿಯಲಿದೆ. ಎರಡೂ ನಗರಗಳ ನಡುವಿನ ಪ್ರಯಾಣ ಅವಧಿಯನ್ನು ಶೇ.95ರಷ್ಟು ಕಡಿತ ಮಾಡಲಿದೆ. ಅಂದರೆ ಆರು ಗಂಟೆಯಿಂದ ಕೇವಲ 20 ನಿಮಿಷಕ್ಕೆ ಇಳಿಸಲಿದೆ. ಈ ಮೂಲಕ ಇಂಧನ, ಸಾಗಣೆ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಇಳಿಸಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಶಾನ್ಯದ ಮೊದಲ ತುರ್ತು ಭೂಸ್ಪರ್ಶ ನೆಲೆಗೆ ಚಾಲನೆಹೇವೇಲಿ ಮೋದಿ ಪ್ಲೇನ್‌ ಲ್ಯಾಡಿಂಗ್‌
ಪನ್ನು ಹತ್ಯೆಗೆ ಸಂಚು: ನಿಖಿಲ್‌ ಗುಪ್ತಾ ದಿಢೀರ್‌ ತಪ್ಪೊಪ್ಪಿಗೆ