ಸಿಂಹ, ಹುಲಿ ರಕ್ಷಣೆಗೆ ದೇಶಗಳ ಒಕ್ಕೂಟ: ಸಂಪುಟ ಅಸ್ತು

KannadaprabhaNewsNetwork |  
Published : Mar 01, 2024, 02:16 AM IST
ಹುಲಿ | Kannada Prabha

ಸಾರಾಂಶ

ಒಕ್ಕೂಟದಿಂದ ಏಕರೂಪದ ಸಂರಕ್ಷಣಾ ಯೋಜನೆ ರೂಪಿಸಲಾಗುತ್ತಿದ್ದು, ಈ ಸಂಸ್ಥೆಯ ಸ್ಥಾಪನೆ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರಸ್ತುತ ಆಯವ್ಯಯದಲ್ಲಿ 150 ಕೋಟಿ ರು. ತೆಗೆದಿರಿಸಿದೆ.

ನವದೆಹಲಿ: ಚಿರತೆ, ಹುಲಿ, ಸಿಂಹವೂ ಸೇರಿದಂತೆ ಬೆಕ್ಕಿನ ಪ್ರಭೇದದ ದೈತ್ಯ ಪ್ರಾಣಿಗಳ ಸಂರಕ್ಷಣೆಯ ಧ್ಯೇಯದೊಂದಿಗೆ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ದೈತ್ಯ ಬೆಕ್ಕು ಪ್ರಭೇದಗಳ ಒಕ್ಕೂಟ (ಐಬಿಸಿಎ) ರಚನೆಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಒಕ್ಕೂಟದ ಕೇಂದ್ರ ಕಚೇರಿಯು ಭಾರತದಲ್ಲಿ ಇರಲಿದ್ದು, ಬೆಕ್ಕಿನ ಪ್ರಭೇದಕ್ಕೆ ಸೇರಿದ ಬೃಹತ್‌ ಪ್ರಾಣಿಗಳು ಇರುವ 96 ರಾಷ್ಟ್ರಗಳು ಈ ಒಕ್ಕೂಟ ಸೇರುವ ಮೂಲಕ ಅವುಗಳ ಸಂರಕ್ಷಣೆ ಮಾಡಲು ಏಕರೂಪದ ಯೋಜನೆ ರೂಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಒಕ್ಕೂಟಕ್ಕಾಗಿಯೇ ಐದು ವರ್ಷಗಳ ಅವಧಿಗೆ ಆಯವ್ಯಯದಲ್ಲಿ ಸುಮಾರು 150 ಕೋಟಿ ರು. ಹಣವನ್ನು ತೆಗೆದಿರಿಸಿದೆ. ಈ ಒಕ್ಕೂಟದಲ್ಲಿ ಬೆಕ್ಕಿನ ಪ್ರಭೇದಕ್ಕೆ ಸೇರಿದ ಹುಲಿ, ಚಿರತೆ, ಸಿಂಹ, ಪೂಮಾ, ಜಾಗ್ವಾರ್‌, ಚೀತಾ ಮತ್ತು ಹಿಮಚಿರತೆಗಳನ್ನು ಪರಸ್ಪರ ಸೌಹಾರ್ದದ ಮೂಲಕ ರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾಗವತ್‌ ವಿರುದ್ಧ ನ್ಯೂಯಾರ್ಕಲ್ಲಿ ಖಲಿಸ್ತಾನಿ ಉಗ್ರರಿಂದ ಪ್ರತಿಭಟನೆ
ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಶಹಬ್ಬಾಸ್!