ಸಿಬಿಎಸ್‌ಇ 12ನೇ ತರಗತಿ ಮರು ಮೌಲ್ಯಮಾಪನ ಶುಲ್ಕ ಇಳಿಕೆ

KannadaprabhaNewsNetwork |  
Published : May 18, 2026, 01:45 AM IST
ಸಿಬಿಎಸ್‌ಇ | Kannada Prabha

ಸಾರಾಂಶ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭಸುದ್ದಿ ನೀಡಿದ್ದು, ಸ್ಕ್ಯಾನ್‌ ಮಾಡಲಾದ ಉತ್ತರಪತ್ರಿಕೆ ಪಡೆಯುವುದು, ಅಂಕಗಳ ಪರಿಶೀಲನೆ, ಮರುಮೌಲ್ಯಮಾಪಲನದಂತಹ ಸೇವೆಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಭಾರೀ ಇಳಿಕೆ ಮಾಡಿದೆ. ಇದು 2026ರಿಂದಲೇ ಜಾರಿಗೆ ಬರಲಿದೆ.

ಸ್ಕ್ಯಾನ್ಡ್‌ ಪ್ರತಿ ಪಡೆಯಲು ₹700 ಬದಲು ₹100ಅಂಕ ಪರಿಶೀಲನೆಗೆ ₹500 ಬದಲು ₹100

ಪ್ರತಿ ಪ್ರಶ್ನೆ ಮರುಪರಿಶೀಲನೆಗೆ ₹25

ಮೊದಲು ಈ ಮೊತ್ತ ₹100 ಇತ್ತು

ಈ ವರ್ಷದಿಂದಲೇ ಬದಲಾವಣೆಗಳು ಜಾರಿಮೊದಲ ಬಾರಿ ಒಎಸ್‌ಎಂ ಬಳಸಿ ಮೌಲ್ಯಮಾಪನ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭಸುದ್ದಿ ನೀಡಿದ್ದು, ಸ್ಕ್ಯಾನ್‌ ಮಾಡಲಾದ ಉತ್ತರಪತ್ರಿಕೆ ಪಡೆಯುವುದು, ಅಂಕಗಳ ಪರಿಶೀಲನೆ, ಮರುಮೌಲ್ಯಮಾಪಲನದಂತಹ ಸೇವೆಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಭಾರೀ ಇಳಿಕೆ ಮಾಡಿದೆ. ಇದು 2026ರಿಂದಲೇ ಜಾರಿಗೆ ಬರಲಿದೆ.

ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಬದಲಾವಣೆ ಮಾಡಿರುವುದಾಗಿ ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಏನೇನು ಬದಲಾವಣೆ?:

ಹೊಸ ದರದ ಪ್ರಕಾರ, ಇಷ್ಟುದಿನ ಸ್ಕ್ಯಾನ್‌ ಮಾಡಲಾದ ಉತ್ತರಪತ್ರಿಕೆಯನ್ನು ಪಡೆಯಲು ಪ್ರತಿ ವಿಷಯಕ್ಕೆ 700 ರು. ಪಾವತಿಸುತ್ತಿದ್ದ ವಿದ್ಯಾರ್ಥಿಗಳು ಇನ್ನುಮುಂದೆ ಕೇವಲ 100 ರು. ಪಾವತಿ ಮಾಡಬೇಕಾಗುವುದು. ಅಂತೆಯೇ, ಅಂಕಗಳನ್ನು ಪರಿಶೀಲಿಸಬೇಕಾದಲ್ಲೂ 500 ರು. ಬದಲು 100 ರು. ನೀಡಿದರೆ ಸಾಕು.

ಉತ್ತರಪತ್ರಿಕೆಯ ಮರುಪರಿಶೀಲನೆ ಮಾಡಿಸಬೇಕಾದಲ್ಲಿ ಪ್ರತಿ ಉತ್ತರಕ್ಕೆ 100 ರು. ಪಾವತಿಸುತ್ತಿದ್ದ ಜಾಗದಲ್ಲೀಗ 25 ರು. ಪಾವತಿಸಬೇಕು. ಒಂದೊಮ್ಮೆ ಮರುಪರಿಶೀಲನೆ ಬಳಿಕ ಅಂಕ ಹೆಚ್ಚಿದರೆ, ಪಾವತಿಸಿದ ಅಷ್ಟೂ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರಳಿಸಲಾಗುವುದು. ಮೊದಲ ಬಾರಿ ಒಎಸ್‌ಎಂ:

ಆನ್‌-ಸ್ಕ್ರೀನ್‌ ಮಾರ್ಕಿಂಗ್‌ ಸಿಸ್ಟಂ(ಒಎಸ್‌ಎಂ) ವ್ಯವಸ್ಥೆಯನ್ನು 12ನೇ ತರಗತಿ ಪರೀಕ್ಷೆ ಮೌಲ್ಯಮಾಪನದ ವೇಳೆ ಇದೇ ಮೊದಲ ಬಾರಿ ಬಳಸಲಾಗಿದೆ. ಇದರಲ್ಲಿ, ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಸ್ಕ್ಯಾನ್‌ ಮಾಡಿ ಪಿಡಿಎಫ್‌ ರೂಪದಲ್ಲಿ ಸಿಬಿಎಸ್‌ಇ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಶಿಕ್ಷಕರು ಅದನ್ನು ಅಲ್ಲೇ ಪರಿಶೀಲಿಸಿ ಅಂಕ ನೀಡುತ್ತಾರೆ. ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲೂ ಸಹಕಾರಿ. ಈ ಬಾರಿ 98 ಉತ್ತರಪತ್ರಿಕೆಗಳನ್ನು ಒಎಸ್‌ಎಂ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಶಾಯಿ ಸರಿಯಾಗಿ ಮೂಡಿರದ ಅಥವಾ ಸ್ಕ್ಯಾನ್‌ ಮಾಡಿದಾಗ ಕೈಬರಹ ಅರ್ಥವಾದಂತೆ ಇದ್ದರೆ ಅಂತಹವುಗಳನ್ನು ಮಾತ್ರ ನೇರವಾಗಿ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು. 2014ರಲ್ಲಿ ಇದನ್ನು ಪರಿಚಯಿಸಲಾಗಿತ್ತಾದರೂ ತಾಂತ್ರಿಕ ಹಾಗೂ ಮೂಲಸೌಕರ್ಯ ಕೊರತೆಯಿಂದಾಗಿ ಪೂರ್ಣಪ್ರಮಾಣದ ಅಳವಡಿಕೆ ಸಾಧ್ಯವಾಗಿರಲಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

32ನೇ ಬಾರಿ ಎವರೆಸ್ಟ್‌ ಹತ್ತಿ ರೀತಾ ದಾಖಲೆ
ಇಂದು ಕೇರಳ ಸಿಎಂ ಅಗಿ ಸತೀಶನ್ ಶಪಥ