ಕಾಡಿನಿಂದ ನಾಡಿಗೆ ನುಗ್ಗಿದ ಆಫ್ರಿಕಾದಿಂದ ಭಾರತಕ್ಕೆ ಕರೆತಂದಿರುವ ಚೀತಾಗಳ ಮೇಲೆ ಜನರ ಕಲ್ಲೇಟು!

KannadaprabhaNewsNetwork |  
Published : Mar 25, 2025, 12:46 AM ISTUpdated : Mar 25, 2025, 04:29 AM IST
ಚೀತಾ  | Kannada Prabha

ಸಾರಾಂಶ

ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಕರೆತಂದಿರುವ ಚೀತಾಗಳ ಮೇಲೆ ಜನರು ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಶಿಯೋಪುರ/ನವದೆಹಲಿ: ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಕರೆತಂದಿರುವ ಚೀತಾಗಳ ಮೇಲೆ ಜನರು ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ಮಧ್ಯ ಪ್ರದೇಶದಲ್ಲಿ ನಡೆದಿದೆ.

ನಿಗಾ ಘಟಕದಿಂದ ಅರಣ್ಯಕ್ಕೆ ಬಿಟ್ಟಂತಹ ಹೆಣ್ಣು ಚೀತಾ ಜ್ವಾಲಾ ಮತ್ತು ಅದರ 4 ಮರಿಗಳು ಸೋಮವಾರ ಕಾಡಿನಿಂದ ನಾಡಿಗೆ ನುಗ್ಗಿ ಬೆಳಗ್ಗೆ 9 ಗಂಟೆಗೆ ಶಿಯೋಪುರ ಜಿಲ್ಲೆಯ ಬೆಹರ್ದಾ ಹಳ್ಳಿಗೆ ಹಸುವಿನ ಕರುವನ್ನು ಬೇಟೆಯಾಡಲು ತೆರಳಿದ್ದವು. ಇದನ್ನು ಗಮನಿಸಿದ ಸ್ಥಳೀಯರು, ಕೈಯಲ್ಲಿ ಕೋಲು ಹಿಡಿದು, ಬೆದರಿಸಲು ಯತ್ನಿಸಿದ್ದಾರೆ. ಈ ವೇಳೆ ಕೆಲವರು ಚೀತಾಗಳ ಮೇಲೆ ಕಲ್ಲುತೂರಿ ಬೆದರಿಸಿ ದೂರ ಅಟ್ಟಿದ್ದಾರೆ. ಅರಣ್ಯ ಸಿಬ್ಬಂದಿ ಜನರಿಂದ ಚೀತಾಗಳನ್ನು ರಕ್ಷಿಸಿದ್ದಾರೆ.

ಇದರ ಬೆನ್ನಲ್ಲೇ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಿರಳೆ ಪಾರ್ಟಿಯಿಂದ ‘ಜನ ಏನ್‌ ಹೇಳ್ತಾರೆ’ ಅಭಿಯಾನ
ಯುಪಿಐಗೆ ಶುಲ್ಕ ವಿಧಿಸುವ ಬಿಲ್‌ ಲೋಕಸಭೇಲಿ ಪಾಸ್‌