- 15 ವರ್ಷ ಪಕ್ಷಕ್ಕೆ ದುಡಿದು ಈಗ ಗುಡ್ಬೈ
ನವದೆಹಲಿ: 2012ರಲ್ಲಿ ಆಪ್ ಸ್ಥಾಪನೆಯಾದಾಗ ಪಕ್ಷ ಸೇರಿದ ಸಂಶದ ರಾಘವ ಚಡ್ಢಾ, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಆಪ್ತರಾಗಿ ಗುರುತಿಸಿಕೊಂಡರು. ನಂತರ ಹಂತ ಹಂತವಾಗಿ ಬೆಳೆಯುತ್ತಾ, ಪಕ್ಷದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು. 2022ರ ಪಂಜಾಬ್ ವಿಧಾನಸಭಾ ಚುನಾವಣಾ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ನಂತರದ ವರ್ಷಗಳಲ್ಲಿ ಪಕ್ಷದ ಜೊತೆ ಸಂಬಂಧ ಹದಗೆಡುತ್ತಾ ಬಂದಿತು. 2024ರಲ್ಲಿ ಕೇಜ್ರಿವಾಲ್ ಬಂಧನವಾದಾಗ, ಚಡ್ಢಾ ವಿದೇಶದಲ್ಲಿದ್ದುದು ಹಾಗೂ ಕೇಜ್ರಿವಾಲ್ ಪರ ಹೋರಾಟದಲ್ಲಿ ಭಾಗಿಯಾಗದೇ ಇದ್ದುದು ಸಂಬಂಧ ಹದಗೆಡಲು ಮುಖ್ಯ ಕಾರಣವಾಯಿತು.
ಇತ್ತೀಚೆಗಷ್ಟೇ ಅವರು ಪಕ್ಷದ ಪರವಾಗಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸದನದಲ್ಲಿ ಮಾತಾಡುವುದಿಲ್ಲ ಎಂದು ಆರೋಪಿಸಿ, ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕ ಸ್ಥಾನದಿಂದ ವಜಾ ಮಾಡಲಾಗಿತ್ತು. ಅಂದಿನಿಂದಲೂ ಪಕ್ಷದ ನಾಯಕರು ಮತ್ತು ಚಡ್ಢಾ ನಡುವೆ ತೀವ್ರ ವಾಕ್ಸಮರ ನಡೆಯುತ್ತಿತ್ತು. ಅಂತಿಮವಾಗಿ 7 ಸಂಸದರು ಪಕ್ಷವನ್ನೇ ತೊರೆಯುವ ಮೂಲಕ ರಾಜಕೀಯ ಕಿತ್ತಾಟ ನಿರ್ಣಾಯಕ ತಿರುವು ಪಡೆದುಕೊಂಡಿದೆ. 12 ವರ್ಷ ಹಿಂದೆ ಪಕ್ಷ ಸ್ಥಾಪನೆ ಬಳಿಕ ಆಪ್ಗೆ ಆದ ದೊಡ್ಡ ಆಘಾತ ಇದಾಗಿದೆ.ಇ.ಡಿ. ಕೇಸು ಇದ್ದವರೂ ಬಿಜೆಪಿ:
==
-2027ರ ಚುನಾವಣೆಗೆ ಮುನ್ನ ಬಿಜೆಪಿ ವಂಚನೆ: ಕೇಜ್ರಿವಾಲ್
- 7 ಸಂಸದರ ಪೈಕಿ ಮೂವರ ಅನರ್ಹತೆಗೆ ದೂರು: ಆಪ್
ನವದೆಹಲಿ: ಪಕ್ಷ ತೊರೆದು, ತಮ್ಮ ಪರಮ ವೈರಿ ಪಕ್ಷವಾದ ಬಿಜೆಪಿ ಸೇರ್ಪಡೆಯಾದ ರಾಘವ್ ಚಡ್ಢಾ ಹಾಗೂ ಇತರರ ವಿರುದ್ಧ ಆಪ್ ಕೆಂಡಾಮಂಡಲವಾಗಿದೆ. ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಪಕ್ಷಾಂತರ ಕಾರ್ಯದಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.‘2027ರ ಚುನಾವಣೆಗೂ ಮುನ್ನ ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ’ ಎಂದು ಅರವಿಂದ್ ಕೇಜ್ರಿವಾಲ್ ಚುಟುಕು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ಮೂವರ ಅನರ್ಹತೆಗೆ ಕ್ರಮ:7 ಸಂಸದರ ಪೈಕಿ ಬಹಿರಂಗವಾಗಿ ಮೂವರು (ರಾಘವ ಚಡ್ಢಾ, ಅಶೋಕ್ ಮಿತ್ತಲ್ ಹಾಗೂ ಸಂದೀಪ್ ಪಾಠಕ್) ಮಾತ್ರ ಬಿಜೆಪಿ ಸೇರಿದ್ದಾರೆ. ಇವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹ ಮಾಡಬೇಕು ಎಂದು ಆಪ್ ದೂರು ಸಲ್ಲಿಸಲು ನಿರ್ಧರಿಸಿದೆ. ಪಟ್ಟಿಯಲ್ಲಿರುವ ಇನ್ನುಳಿದ ಸಂಸದರಾದ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ ಹಾಗೂ ವಿಕ್ರಂ ಸಾಹ್ನಿ) ಇನ್ನೂ ಬಿಜೆಪಿಯನ್ನು ಅಧಿಕೃತವಾಗಿ ಸೇರಿಲ್ಲ. ಹೀಗಾಗಿ ಇವರ ವಿರುದ್ಧ ದೂರು ಸಲ್ಲಿಕೆ ಬಗ್ಗೆ ತೀರ್ಮಾನ ಆಗಿಲ್ಲ.