ಬಂಗಾಳದಲ್ಲಿ 47.2 ಡಿಗ್ರಿ ಉಷ್ಣಾಂಶ ದಾಖಲು!

KannadaprabhaNewsNetwork |  
Published : May 01, 2024, 01:19 AM IST
ಬಿಸಿಲು | Kannada Prabha

ಸಾರಾಂಶ

ಬಂಗಾಳ, ಜಾರ್ಖಂಡ್‌, ಕೇರಳದ ಹಲವೆಡೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಕೇರಳದ ಪಾಲಕ್ಕಾಡ್‌ನಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ನವದೆಹಲಿ: ಬಿಸಿಲಿನ ಬೇಗೆಯಿಂದ ಸಮಸ್ತ ಭಾರತ ತತ್ತರಿಸುತ್ತಿದ್ದು, ಉಷ್ಣಹವೆಯು ಹಲವು ಪ್ರದೇಶಗಳಲ್ಲಿ ತಾಪಮಾನಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳದ ಕಾಲೈಕುಂಡದಲ್ಲಿ 47.2 ಡಿಗ್ರಿ, ಜಾರ್ಖಂಡ್‌ನ ಸಿಂಗ್‌ಭಮ್‌ ಜಿಲ್ಲೆಯಲ್ಲಿ ಗರಿಷ್ಠ 47.1 ಡಿಗ್ರಿ ತಾಪಮಾನ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಕೇರಳದ ಹಲವೆಡೆ ಮುಂದಿನ ಕೆಲವು ದಿನಗಳ ಕಾಲ ಆರೆಂಜ್ ಅಲರ್ಟ್‌ ಘೋಷಿಸಿವೆ. ಈ ನಡುವೆ ಬುಧವಾರ ಜಾರ್ಖಂಡ್‌ನ ಡುಮ್ಕಾದಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಈ ನಡುವೆ ದೆಹಲಿಯಲ್ಲಿ ತಾಪಮಾನ ತುಸು ಕಡಿಮೆಯಾಗಿದ್ದು, 36.5 ಡಿಗ್ರಿಗೆ ಇಳಿದಿದೆ.

ಪಾಲಕ್ಕಾಡ್‌ನಲ್ಲಿ ರಜೆ ಮುಂದುವರಿಕೆ: ಈ ನಡುವೆ ಕೇರಳದ ಪಾಲಕ್ಕಾಡ್‌ನಲ್ಲಿ ಮೇ.4ರವರೆಗೆ 41 ಡಿಗ್ರಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಮುಂದುವರಿಸಿದ್ದು ಕಾರ್ಯಕ್ರಮಗಳನ್ನು ಸಂಜೆ ಸಮಯದಲ್ಲಿ ಆಯೋಜಿಸುವಂತೆ ಕರೆ ನೀಡಿದೆ.

ಗರಿಷ್ಠ ತಾಪಮಾನ:

ಕಾಲೈಕುಂಡ- 47.2 ಡಿಗ್ರಿ

ಬಹರಗೋರಾ- 47.1 ಡಿಗ್ರಿ

ಜಮ್ಶೆಡ್‌ಪುರ- 45.5 ಡಿಗ್ರಿ

ಗೊಡ್ಡಾ-45.5 ಡಿಗ್ರಿ

ಕಾಂಡ್ಲಾ- 45.4 ಡಿಗ್ರಿ

ಗಂಗಾನಗರ- 44 ಡಿಗ್ರಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ