ಹಲ್ದ್ವಾನಿ: ಅಕ್ರಮ ಮದರಸಾ ಧ್ವಂಸದ ಬಳಿಕ ಉತ್ತರಾಖಂಡದ ಹಲ್ವ್ದಾನಿಯಲ್ಲಿ ಗುರುವಾರ ಸಂಭವಿಸಿದ್ದ ಭಾರೀ ಹಿಂಸಾಚಾರ ಶನಿವಾರ ಶಾಂತ ಪರಿಸ್ಥಿತಿ ನೆಲೆಸಿದೆ. ಹಿಂಸೆಗೆ 6 ಜನರು ಬಲಿಯಾದ ಬಳಿಕ ನಗರದಲ್ಲಿ ಜಾರಿ ಮಾಡಲಾಗಿದ್ದ ಕರ್ಫ್ಯೂ ಹಿಂಪಡೆಯಲಾಗಿದೆ.
ಹಿಂಸಾಚಾರ ನಡೆದ ಬಂಬೂಲ್ಪುರ ಪ್ರದೇಶ ಹೊರತುಪಡಿಸಿ ನಗರದ ಇತರೆಡೆ ನಿಷೇಧಾಜ್ಞೆ ಹಿಂತೆಗೆದಿದ್ದು, ದೈನಂದಿನ ಚಟುವಟಿಕೆಗಳು ಎಂದಿನಂತೆ ಆರಂಭವಾಗಿವೆ.
ಆದರೆ ಮುನ್ನಚ್ಚೆರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳು ಮತ್ತು ಅಂತರ್ಜಾಲ ಸೇವೆಗಳ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಈ ನಡುವೆ ಘಟನೆಯ ಕುರಿತು ಕುಮಾವೊನ್ ಕಮಿಷನರ್ ದೀಪಕ್ ರಾವತ್ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ.
ಘಟನೆ ಸಂಬಂಧ 3 ಎಫ್ಐಆರ್ ದಾಖಲಾಗಿದ್ದು, 16 ಮಂದಿಯ ಮೇಲೆ ಆರೋಪಪಟ್ಟಿ ದಾಖಲಿಸಲಾಗಿದೆ. ಇದರ ಪೈಕಿ 5 ಮಂದಿಯನ್ನು ಇದುವರೆಗೂ ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.