ಹೈದರಾಬಾದ್‌ನಲ್ಲಿ ಸಿದ್ಧವಾಗಲಿದೆ ರಫೇಲ್‌ ಯುದ್ಧ ವಿಮಾನದ ಬಾಡಿ

KannadaprabhaNewsNetwork |  
Published : Jun 06, 2025, 12:27 AM ISTUpdated : Jun 06, 2025, 04:35 AM IST
ರಫೇಲ್‌ | Kannada Prabha

ಸಾರಾಂಶ

ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್‌) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ.  

 ನವದೆಹಲಿ : ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್‌) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ. 2028ರಿಂದ ದೇಶೀ ನಿರ್ಮಿತ ಬಾಡಿಯ ರಫೇಲ್‌ ಯುದ್ಧವಿಮಾನ, ಭಾರತಕ್ಕೆ ಪೂರೈಕೆಯಾಗುವ ನಿರೀಕ್ಷೆ ಇದೆ.

ಈ ಸಹಭಾಗಿತ್ವದ ಪ್ರಕಾರ, ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌(ಟಿಎಎಸ್‌ಎಲ್‌) ಹೈದರಾಬಾದ್‌ನಲ್ಲಿ ರಫೇಲ್‌ ಯುದ್ಧ ವಿಮಾನ ತಯಾರಿಕೆಯ ಅತ್ಯಾಧುನಿಕ ಉತ್ಪಾದನಾ ಘಟಕ ನಿರ್ಮಿಸಲಿದೆ. ರಫೇಲ್‌ ಯುದ್ಧವಿಮಾನದ ಮೊದಲ ಬಾಡಿ 2028ನೇ ವಿತ್ತವರ್ಷದಲ್ಲಿ ಹೊರಬರಲಿದೆ. ಈ ಘಟಕ ಸಂಪೂರ್ಣವಾಗಿ ಸಿದ್ಧಗೊಂಡಾಗ ಪ್ರತಿ ತಿಂಗಳು ಎರಡು ಬಾಡಿಗಳು ನಿರ್ಮಾಣವಾಗಿ ಹೊರಬರಲಿವೆ. ಆ ಬಳಿಕ ಈ ಯುದ್ಧವಿಮಾನಕ್ಕೆ ಇತರೆ ಬಿಡಿಭಾಗಗಳನ್ನು ಜೋಡಿಸುವ ಕೆಲಸ ಆಗಲಿದೆ ಎಂದು ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌ ಲಿ. ಹೇಳಿದೆ.

ಏನಿದು ಫ್ಯೂಸೆಲಾಜ್‌?:

ಫ್ಯೂಸೆಲಾಜ್‌ ಎಂಬುದು ಯಾವುದೇ ಯುದ್ಧ ವಿಮಾನದ ಪ್ರಮುಖ ಚೌಕಟ್ಟಾಗಿದೆ. ಇದು ಕಾಕ್‌ಪಿಟ್‌, ಇಂಜಿನ್‌, ಇಲೆಕ್ಟ್ರಾನಿಕ್‌ ವಿಭಾಗವನ್ನು ಜೋಡಿಸುತ್ತದೆ. ಅಲ್ಲದೆ ರೆಕ್ಕೆಗಳು ಮತ್ತು ಬಾಲವನ್ನು ಬ್ಯಾಲೆನ್ಸ್‌ ಮಾಡುತ್ತದೆ. ರಫೇಲ್‌ನ ಈ ಫ್ಯೂಸೆಲಾಜ್‌ ವಿಶೇಷ ರೀತಿಯಲ್ಲಿ ನಿರ್ಮಾಣವಾಗುವ ಕಾರಣ ಯುದ್ಧವಿಮಾನವು ಶತ್ರುಗಳ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ನೆರವು ನೀಡುತ್ತದೆ. ವಿಶೇಷವೆಂದರೆ ಡಸಾಲ್ಟ್‌ ಏವಿಷೇಯನ್‌ ಕಂಪನಿ ತನ್ನ ಯುದ್ಧವಿಮಾನದ ಬಾಡಿಯನ್ನು ಫ್ರಾನ್ಸ್‌ನ ಹೊರಗೆ ನಿರ್ಮಿಸುತ್ತಿರುವುದು ಇದೇ ಮೊದಲು.

ಈ ಸಹಭಾಗಿತ್ವವು ಭಾರತದ ಏರೋಸ್ಪೇಸ್‌ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಟಿಎಎಸ್‌ಎಲ್‌ ಹೇಳಿಕೊಂಡಿದೆ.

ಈಗಾಗಲೇ ಹಲವು ರಫೇಲ್‌ ಯುದ್ಧವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿವೆ. ಇನ್ನು ನೌಕಾದಳಕ್ಕೆ 26 ಯುದ್ಧವಿಮಾನಗಳು 2028ರಿಂದ 2030ರ ನಡುವೆ ಹಂತ ಹಂತವಾಗಿ ಪೂರೈಕೆಯಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ