ಉತ್ತರಪ್ರದೇಶದ ಮೇರಠ್ನ ಝಾಕಿರ್ ನಗರದಲ್ಲಿ 3 ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದ್ದು, 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಮೇರಠ್: ಉತ್ತರಪ್ರದೇಶದ ಮೇರಠ್ನ ಝಾಕಿರ್ ನಗರದಲ್ಲಿ 3 ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದ್ದು, 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಶನಿವಾರ ಮಧ್ಯಾಹ್ನ ಮೂರು ಅಂತಸ್ತಿನ ಮನೆ ಏಕಾಏಕಿ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಕಾರ್ಯಚರಣೆ ತಂಡ, ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.ಗಾಯಾಳುಗಳನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ರಕ್ಷಣಾ ಕಾರ್ಯಾಚರಣೆ ತಂಡ ಹೊರಗೆ ತೆಗೆದಿದ್ದು, ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಮಾಚಾರ ಶಂಕೆ: 3 ಮಹಿಳೆಯರು ಸೇರಿ ಐವರ ಬಡಿದು ಹತ್ಯೆ
ಸುಕ್ಮಾ (ಛತ್ತೀಸ್ಗಢ): ಗ್ರಾಮದಲ್ಲಿ ವಾಮಾಚಾರ ನಡೆಸುತ್ತಿರುವ ಶಂಕೆ ಮೇರೆಗೆ ಇಲ್ಲಿನ ಗ್ರಾಮಸ್ಥರು ಮೂವರು ಮಹಿಳೆಯರು ಸೇರಿ 5 ಜನರನ್ನು ಬಡಿದು ಕೊಂದಿರುವ ಘಟನೆ ಛತ್ತೀಸ್ಗಢದಲ್ಲಿ ಭಾನುವಾರ ನಡೆದಿದೆ.ಆದಿವಾಸಿಗಳೇ ಹೆಚ್ಚಿರುವ ಸುಕ್ಮಾ ಜಿಲ್ಲೆಯ ಏಕ್ತಾಲ್ ಎಂಬ ಹಳ್ಳಿಯಲ್ಲಿ ವಾಮಾಚಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಅದೇ ಗ್ರಾಮಸ್ಥರು ಇವರನ್ನು ಹತ್ಯೆ ಮಾಡಿದ್ದಾರೆ. ಮೌಸಂ ಕನ್ನಾ (34), ಮೌಸಂ ಬಿರಿ, ಮೌಸಂ ಬುಚ್ಚಾ (34) ಮೌಸಂ ಅರ್ಜೋ (32) ಮತ್ತು ಕರ್ಕಾ ಲಚ್ಚಿ (43) ಎಂಬುವರನ್ನು ಹತ್ಯೆಗೆ ಈಡಾದವರು. ಘಟನೆ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸೆ.12 ಗುರುವಾರದಂದು ಛತ್ತೀಸ್ಗಢದ ಭಾಟಾಪಾರ ಜಿಲ್ಲೆಯಲ್ಲಿ ವಾಮಾಚಾರದ ಶಂಕೆ ಮೇರೆಗೆ ಕಂದಮ್ಮ ಸೇರಿ ನಾಲ್ವರನ್ನು ಜನರು ಹತ್ಯೆ ಮಾಡಿದ್ದಾರೆ.
==ಬಿಹಾರದಲ್ಲಿ ಪಾನ ನಿಷೇಧ ತೆರವು: ಪ್ರಶಾಂತ್ ಕಿಶೋರ್ ಭರವಸೆ
ಪಟನಾ: ಬಿಹಾರ ಚುನಾವಣೆಯಲ್ಲಿ ತಮ್ಮ ಜನ್ ಸುರಾಜ್ ಪಕ್ಷ ಗೆದ್ದರೆ 1 ಗಂಟೆಯ ಒಳಗೆ ರಾಜ್ಯದಲ್ಲಿ ಹೇರಲಾಗಿರುವ ಪಾನ ನಿಷೇಧವನ್ನು ತೆರವು ಗೊಳಿಸುವುದಾಗಿ ಪಕ್ಷದ ಮುಖ್ಯಸ್ಥ ಮತ್ತು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.ಅ.2ರಂದು ಜನ್ ಸುರಾಜ್ ಪಕ್ಷವನ್ನು ಅಧಿಕೃತವಾಗಿ ಸ್ಥಾಪಿಸುವ ಯೋಜನೆ ಹಾಕಿಕೊಂಡಿರುವ ಅವರು ಈ ಘೋಷಣೆ ಮಾಡಿದ್ದಾರೆ.‘ನಾವು ಕಳೆದರೆರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದು, ವಿಶೇಷ ತಯಾರಿಯ ಅಗತ್ಯವಿಲ್ಲ’ ಎಂದು ಪ್ರಶಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ 2016ರ ಏಪ್ರಿಲ್ನಲ್ಲಿ ಪಾನ ನಿಷೇಧ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಕಳ್ಳಬಟ್ಟಿ ಮಾರಾಟ, ಸೇವನೆ ಅಧಿಕವಾಗಿತ್ತು. ಇದನ್ನು ತಡೆಯುವ ಉದ್ದೇಶದಿಂದ ಕಿಶೋರ್ ಈ ಘೋಷಣೆ ಮಾಡಿದ್ದಾರೆ.
==ಹರ್ಯಾಣದಲ್ಲಿ ಬಿಜೆಪಿ ಗೆದ್ದರೆ ಸಿಎಂ ಹುದ್ದೆಗೆ ನಾನು ದಾವೇದಾರ: ಅನಿಲ್ ವಿಜ್
ಚಂಡೀಗಢ: ಹರ್ಯಾಣದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಗೆ ನಾನು ದಾವೇದಾರ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಅನಿಲ್ ವಿಜ್ ಭಾನುವಾರ ತಿಳಿಸಿದ್ದಾರೆ.ಇಲ್ಲಿ ಬಿಜೆಪಿ ಮತ್ತೆ ಅಧಿಕಾರಿಕ್ಕೆ ಬಂದರೆ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಪಕ್ಷ ತಿಳಿಸಿದೆ. ಈ ನಡುವೆ ನಾನು ಸಿಎಂ ಅಭ್ಯರ್ಥಿಯಾಗುತ್ತೇನೆ ಎಂದು ಅನಿಲ್ ವಿಜ್ ಹೇಳಿಕೆ ಕೊಟ್ಟಿರುವುದು ರಾಜ್ಯ ಬಿಜೆಪಿ ಘಟಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಭಾನುವಾರ ಮಾತನಾಡಿದ ವಿಜ್, ‘ನಾನು ಇವತ್ತಿನವರೆಗೂ ಪಕ್ಷದಿಂದ ಏನನ್ನೂ ಬಯಸಿಲ್ಲ. ಹರ್ಯಾಣದ ಜನರು ನನ್ನನ್ನು ಭೇಟಿಯಾಗುತ್ತಿದ್ದಾರೆ. ಜನರ ಬೇಡಿಕೆಯ ಮೇರೆಗೆ ಮತ್ತು ಹಿರಿತನದ ಆಧಾರದ ಮೇಲೆ ನಾನು ಸಿಎಂ ಆಗಲು ಅರ್ಹ. ಆದ್ದರಿಂದ ಈ ಬಾರಿ ಮುಖ್ಯಮಂತ್ರಿ ಹುದ್ದೆ ಏರಲು ನಾನು ಹಕ್ಕನ್ನು ಪ್ರತಿಪಾದಿಸುತ್ತೇನೆ’ ಎಂದರು.ಹರ್ಯಾಣ ವಿಧಾನಸಭಾ ಚುನಾವಣೆ ಅ.5 ರಂದು ನಡೆಯಲಿದೆ.
==ವಿಮೆ ಜಿಎಸ್ಟಿ ಪರಿಶೀಲನೆಗೆ ಸಮಿತಿ: ಕರ್ನಾಟಕಕ್ಕೂ ಸ್ಥಾನ
ನವದೆಹಲಿ: ವಿವಿಧ ಆರೋಗ್ಯ ಮತ್ತು ಜೀವ ವಿಮಾ ಮೇಲಿನ ಜಿಎಸ್ಟಿ ದರವನ್ನು ಪರಿಶೀಲಿಸಲು ಜಿಎಸ್ಟಿ ಕೌನ್ಸಿಲ್ ಭಾನುವಾರ 13 ಸದಸ್ಯರ ಸಚಿವರ ಸಮಿತಿಯನ್ನು ರಚಿಸಿದೆ.ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಸಮಿತಿಯ ಸಂಚಾಲಕರಾಗಿದ್ದಾರೆ. ಸಮಿತಿಯ ಸದಸ್ಯರಲ್ಲಿ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಸಚಿವರನ್ನು ಸದಸ್ಯರನ್ನಾಗಿ ನೇಮಿಸಿದೆ.ಈ ಎಲ್ಲಾ ಸದಸ್ಯರು ರಾಜ್ಯಗಳಲ್ಲಿ ಆರೋಗ್ಯ ಮತ್ತು ಜೀವ ವಿಮೆ ಮೇಲಿನ ಜಿಎಸ್ಟಿ ದರವನ್ನು ಪರಿಶೀಲಿಸಿ ಅದರ ವರದಿಯನ್ನು ಅ.30 ರೊಳಗೆ ಸಲ್ಲಿಸುವಂತೆ ಕೌನ್ಸಿಲ್ ತಿಳಿಸಿದೆ.ಆರೋಗ್ಯ ಮತ್ತು ಜೀವ ವಿಮೆ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಸೆ.9 ರಂದು ಜಿಎಸ್ಟಿ ಕೌನ್ಸಿಲ್ ಸಭೆ ಸೇರಿತ್ತು.