ಹರ್ಯಾಣದಿಂದ ಯಮುನೆಗೆ ವಿಷ:ಕೇಜ್ರಿವಾಲ್‌ಗೆ ಆಯೋಗ ನೋಟಿಸ್‌

KannadaprabhaNewsNetwork |  
Published : Jan 29, 2025, 01:31 AM IST

ಸಾರಾಂಶ

ಹರ್ಯಾಣ ಯಮುನಾ ನದಿಗೆ ವಿಷ ಬೆರಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ಬುಧವಾರ ರಾತ್ರಿ 8 ಗಂಟೆಯೊಳಗೆ ಉತ್ತರ ನಿಡುವಂತೆ ಸೂಚಿಸಿದೆ. ಜೊತೆಗೆ ಹೇಳಿಕೆಗೆ ದಾಖಲೆ ಸಮೇತ ಉತ್ತರಿಸಬೇಕು ಎಂದು ಸೂಚಿಸಿದೆ.

ನವದೆಹಲಿ: ಹರ್ಯಾಣ ಯಮುನಾ ನದಿಗೆ ವಿಷ ಬೆರಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ಬುಧವಾರ ರಾತ್ರಿ 8 ಗಂಟೆಯೊಳಗೆ ಉತ್ತರ ನಿಡುವಂತೆ ಸೂಚಿಸಿದೆ. ಜೊತೆಗೆ ಹೇಳಿಕೆಗೆ ದಾಖಲೆ ಸಮೇತ ಉತ್ತರಿಸಬೇಕು ಎಂದು ಸೂಚಿಸಿದೆ.

ಕೇಜ್ರಿವಾಲ್‌ ಹೇಳಿದ್ದೇನು?:

ಮಂಗಳವಾರ ಚುನಾವಣಾ ಪ್ರಚಾರದ ವೇಳೆ ‘ಹರ್ಯಾಣದ ಬಿಜೆಪಿ ಸರ್ಕಾರ ದೆಹಲಿಗರನ್ನು ಕೊಲ್ಲಲೆಂದೇ ಯಮುನಾ ನದಿಯಲ್ಲಿ ವಿಷ ಬೆರಸುತ್ತಿದೆ. ಈ ವಿಷವನ್ನು ನೀರು ಶುದ್ಧೀಕರಣ ಘಟಕಗಳೂ ಸಹ ಸಂಸ್ಕರಿಸಲು ಆಗುವುದಿಲ್ಲ. ಈ ಮೂಲಕ ದೆಹಲಿಗೆ ಕುಡಿಯುವ ನೀರಿಗೆ ಕಂಟಕವೊಡ್ಡಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸುತ್ತಿದೆ. ಆದರೆ ಆಪ್‌ ಇದಕ್ಕೆ ಆಸ್ಪದ ನೀಡುದಿಲ್ಲ’ ಎಂದಿದ್ದರು. ಇದರ ಬೆನ್ನಲ್ಲೇ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತು. ಮತ್ತೊಂದೆಡೆ ಹರ್ಯಾಣ ಸರ್ಕಾರ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ