ಅಕ್ರಮ ಮರಳು ದಂಧೆ: ಲಾಲು ಆಪ್ತ ಸುಭಾಷ್‌ ಯಾದವ್‌ ಬಂಧನ

KannadaprabhaNewsNetwork |  
Published : Mar 11, 2024, 01:20 AM IST
ಸುಭಾಷ್‌ ಯಾದವ್‌ | Kannada Prabha

ಸಾರಾಂಶ

2 ಕೋಟಿ ರು. ನಗದು ಹಾಗೂ ಹಲವು ದಾಖಲೆಗಳ ವಶಪಡಿಸಿಕೊಂಡು ಅಕ್ರಮ ಮರಳು ದಂಧೆ ಮಾಡುತ್ತಿದ್ದ ಲಾಲು ಕುಟುಂಬದ ಆಪ್ತ ಸುಭಾಷ್‌ ಯಾದವ್‌ನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಪಟನಾ: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರ್‌ಜೆಡಿ ಮುಖಂಡ ಮತ್ತು ಲಾಲು ಪ್ರಸಾದ್‌ ಕುಟುಂಬಕ್ಕೆ ಆಪ್ತನಾಗಿರುವ ಸುಭಾಷ್‌ ಕುಮಾರ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ತಡರಾತ್ರಿ ಬಂಧಿಸಿದೆ. ಇದಕ್ಕೂ ಮೊದಲು ಇಡಿ ಸುಭಾಷ್‌ಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ದಾಳಿ ನಡೆಸಿ 2 ಕೋಟಿ ರು. ನಗದು ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಸುಭಾಷ್‌ ನಿರ್ದೇಶಕನಾಗಿರುವ ಸಂಸ್ಥೇ ಮರಳು ಮಾರಾಟಕ್ಕೆ ಇ-ಚಲನ್‌ ನೀಡದೆ 161 ಕೋಟಿ ರು. ಅಕ್ರಮವಾಗಿ ಆದಾಯ ಗಳಿಸಿರುವುದು ಕಂಡು ಬಂದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ