ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ

KannadaprabhaNewsNetwork |  
Published : Mar 10, 2024, 01:32 AM ISTUpdated : Mar 10, 2024, 10:56 AM IST
ಅರುಣ್‌ ಗೋಯೆಲ್‌ | Kannada Prabha

ಸಾರಾಂಶ

ಅತ್ಯಂತ ಅಚ್ಚರಿಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನ ಉಳಿದಿರುವಾಗ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ನವದೆಹಲಿ: ಅತ್ಯಂತ ಅಚ್ಚರಿಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನ ಉಳಿದಿರುವಾಗ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.

ಭಾರತದ ಚುನಾವಣಾ ಆಯೋಗವು 3 ಸದಸ್ಯರ ಆಯೋಗವಾಗಿದ್ದು, ಮುಖ್ಯ ಆಯುಕ್ತ ಹಾಗೂ ಇತರ ಇಬ್ಬರು ಆಯುಕ್ತರು ಇರುತ್ತಾರೆ. ಈಗಾಗಲೇ ಆಯೋಗದಲ್ಲಿ 1 ಆಯುಕ್ತರ ಹುದ್ದೆ ಖಾಲಿ ಇತ್ತು. 

ಈಗ ಗೋಯೆಲ್‌ ರಾಜೀನಾಮೆಯೊಂದಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಆಯೋಗದಲ್ಲಿ ಉಳಿದುಕೊಂಡಿದ್ದಾರೆ. ಗೋಯೆಲ್‌ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. 2027ರವರೆಗೆ ಇವರ ಅವಧಿ ಇತ್ತು.

ಒಬ್ಬರಿಂದಲೇ ಘೋಷಣೆ?
ಈ ಹಿಂದೆ 1999 ಹಾಗೂ 2009ರಲ್ಲಿ ಕೇವಲ ಮುಖ್ಯ ಆಯುಕ್ತ ಸೇರಿ ಇಬ್ಬರು ಆಯುಕ್ತರು ಚುನಾವಣೆ ಘೋಷಿಸಿದ್ದರು. ಈ ಸಲ 2 ಆಯುಕ್ತ ಹುದ್ದೆಗಳೂ ಖಾಲಿ ಆಗಿರುವ ಕಾರಣ ಕೇವಲ ಒಬ್ಬರು ಆಯುಕ್ತರು ಚುನಾವಣೆ ಘೋಷಿಸುವರೇ ಎಂಬುದನ್ನು ಕಾದು ನೋಡಬೇಕಿದೆ. 

ಒಬ್ಬರೇ ಆಯುಕ್ತರು ಲೋಕಸಭೆ ಚುನಾವಣೆ ಘೋಷಿಸಿದರೆ ಇದು ಇಂಥ ಮೊದಲ ವಿದ್ಯಮಾನವಾಗಲಿದೆ.ಅಲ್ಲದೆ , ಗೋಯೆಲ್ ಅವರ ರಾಜೀನಾಮೆಯು ಚುನಾವಣೆ ದಿನಾಂಕ ಘೋಷಣೆಯ ಪರಿಣಾಮ ಬೀರುತ್ತದೆಯೇ ಎಂದು ನೋಡಬೇಕಿದೆ. 

ಇದಲ್ಲದೆ ಅಷ್ಟರೊಳಗೆ ಪ್ರಧಾನಿ ನೇತೃತ್ವದ ಚುನಾವಣಾ ಆಯುಕ್ತರ ನೇಮಕ ಸಮಿತಿ ಸಭೆ ಸೇರಿ ಹೊಸ ಆಯುಕ್ತರ ಹೆಸರು ಶಿಫಾರಸು ಮಾಡಲಿದೆಯೇ ಎಂಬುದೂ ಪ್ರಶ್ನೆಯಾಗಿದೆ.

ಈ ಹಿಂದೆ ಟಿ.ಎನ್‌. ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಆಯೋಗ ಏಕಸದಸ್ಯ ಆಯೋಗವಾಗಿತ್ತು. ನಂತರ ಕಾಯ್ದೆಯನ್ನು ಬದಲಿಸಿ ಒಬ್ಬ ಮುಖ್ಯ ಚುನಾವಣಾ ಆಯುಕ್ತರ ಜತೆ, ಅವರ ಅಧೀನದಲ್ಲಿ ಕೆಲಸ ಮಾಡಲು ಇನ್ನೆರಡು ಆಯುಕ್ತರ ಹುದ್ದೆ ಸೃಷ್ಟಿಸಲಾಗಿತ್ತು.

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು: ಗೋಯೆಲ್, 1985-ಬ್ಯಾಚ್ ಐಎಎಸ್ ಅಧಿಕಾರಿ. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದು ಮತ್ತು ಒಂದು ದಿನದ ನಂತರ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. 

ಅವರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನೇಮಕಕ್ಕೆ ಅಷ್ಟು ಆತುರ ಏಕೆ ಎಂದು ಕೋರ್ಟ್‌ ಕೂಡ ಪ್ರಶ್ನಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ; ವಿಜಯ್‌ ವಿಜಯ್‌ ಘೋಷಣೆ
ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ