ಕೇರಳ ಕರಾವಳಿಯಲ್ಲಿ ಸಿಂಗಾಪುರದ ಹಡಗಿಗೆ ಬೆಂಕಿ : 18 ಸಿಬ್ಬಂದಿ ರಕ್ಷಣೆ

KannadaprabhaNewsNetwork |  
Published : Jun 10, 2025, 12:49 AM ISTUpdated : Jun 10, 2025, 05:35 AM IST
ಕೇರಳ ಹಡಗು  | Kannada Prabha

ಸಾರಾಂಶ

ಕೇರಳದ ಕರಾವಳಿ ತೀರದಲ್ಲಿ ಸಿಂಗಾಪುರದ ಧ್ವಜವಿರುವ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಡಗಿನಲ್ಲಿದ್ದ 18 ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.

ಕೊಚ್ಚಿ: ಕೇರಳದ ಕರಾವಳಿ ತೀರದಲ್ಲಿ ಸಿಂಗಾಪುರದ ಧ್ವಜವಿರುವ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಡಗಿನಲ್ಲಿದ್ದ 18 ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.

ಜೂನ್‌ 7 ರಂದು ಶ್ರೀಲಂಕಾದ ಕೊಲಂಬೋದಿಂದ ಹೊರಟಿದ್ದ 207 ಮೀ. ಉದ್ದದ ಎಂವಿ ವಾನ್‌ ಹೈ 503 ಹೆಸರಿನ ಕಂಟೇನರ್‌ ಹಡಗು ಸೋಮವಾರ ಕೇರಳದ ಕರಾವಳಿ ತೀರ ಪ್ರವೇಶಿಸಿದೆ. ಜೂನ್ 25ಕ್ಕೆ ಹಡಗು ಮುಂಬೈ ತಲುಪಬೇಕಿತ್ತು. ಈ ನಡುವೆ ಬೆಂಕಿ ಕಾಣಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಮತ್ತು ನೌಕಾ ಪಡೆ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 18 ಮಂದಿ ರಕ್ಷಣೆ ಮಾಡಿದ್ದು, ಉಳಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ