ಉತ್ತರಾಖಂಡ ಪ್ರವಾಹ : 3 ಅಂತಸ್ತಿನ ಕಟ್ಟಡದಷ್ಟು ಎತ್ತರ ಅವಶೇಷ ರಾಶಿ!

KannadaprabhaNewsNetwork |  
Published : Aug 09, 2025, 01:12 AM ISTUpdated : Aug 09, 2025, 04:14 AM IST
ಉತ್ತರಾಖಂಡ | Kannada Prabha

ಸಾರಾಂಶ

ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ.

ಧರಾಲಿ: ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ. ಈ ಅವಶೇಷದಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವರ ಶೋಧಕ್ಕೆ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಅವಶೇಷಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಇದು ಸವಾಲಾಗಿ ಪರಿಣಮಿಸಿದೆ. ಇವುಗಳಲ್ಲಿ ಶವ ಇರುವ ಸಂದೇಹವೂ ಇಚೆ.

ಈ ಬಗ್ಗೆ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಐಜಿ ಅರುಣ್‌ ಮೋಹನ್‌ ಜೋಶಿ, ‘ಇದು ಸಾಮಾನ್ಯ ಕಾರ್ಯಾಚರಣೆಯಲ್ಲ. ಮನೆಗಳ ಛಾವಣಿಗಳು ಇರುವಷ್ಟು ಎತ್ತರ ಅವಶೇಷಗಳು ಬಿದ್ದಿವೆ’ ಎಂದರು. ಇಡೀ ಧರಾಲೀಯನ್ನು ಮೊದಲಿನಂತೆ ಮಾಡಲು ಕನಿಷ್ಠ 7 ತಿಂಗಳಾದರೂ ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ದೇಶವ್ಯಾಪಿ ಗ್ಯಾಸ್‌ ಟ್ರಬಲ್‌ಗೆ ಹೋಟೆಲ್‌ಗಳು ಬಂದ್‌ : ಜನಜೀವನದ ಮೇಲೆ ಭಾರೀ ಹೊಡೆತ