ಬೃಹತ್‌ ಜಾಹೀರಾತು ಫಲಕಕ್ಕೆ ಅನುಮತಿ: ಅಧಿಕಾರಿ ಸಸ್ಪೆಂಡ್‌

KannadaprabhaNewsNetwork |  
Published : Jun 26, 2024, 12:39 AM ISTUpdated : Jun 26, 2024, 12:40 AM IST
ಕೈಸರ್‌ ಖಾಲಿದ್‌ | Kannada Prabha

ಸಾರಾಂಶ

ಮುಂಬೈನಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೆ ಬೃಹತ್‌ ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡಿದ್ದ ಐಪಿಎಸ್‌ ಅಧಿಕಾರಿ ಕೈಸರ್‌ ಖಾಲಿದ್‌ರನ್ನು ಅಮಾನತು ಮಾಡಲಾಗಿದೆ.

ಮುಂಬೈ: ಇಲ್ಲಿನ ಟ್ಕೋರ್ಪರ್‌ ಪ್ರದೇಶದಲ್ಲಿ ನಿಯಮ ಮೀರಿ ಬೃಹತ್‌ ಜಾಹೀರಾತು ಫಲಕ ಅಳವಡಿಕೆಗೆ ಅವಕಾಶ ನೀಡಿ 17 ಜನರ ಸಾವಿಗೆ ಕಾರಣರಾಗಿದ್ದ ಐಪಿಎಸ್‌ ಅಧಿಕಾರಿ ಕೈಸರ್‌ ಖಾಲಿದ್‌ರನ್ನು ಅಮಾನತು ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮುಂಬೈನಲ್ಲಿ ನಿಯಮಬಾಹಿರವಾಗಿ 140*120 ಅಡಿಯ ಬೃಹತ್‌ ಜಾಹೀರಾತು ಫಲಕ ಅಳವಡಿಕೆಗೆ ಆಗ ಸರ್ಕಾರಿ ರೈಲ್ವೆ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೈಸರ್‌ ಖಾಲಿದ್‌ ಮಹಾರಾಷ್ಟ್ರ ಗೃಹ ಇಲಾಖೆಯ ಅನುಮತಿ ಪಡೆಯದೆ ಒಪ್ಪಿಗೆ ನೀಡಿದ್ದರು. ಹಾಗಾಗಿ ಅವರನ್ನು ಕರ್ತವ್ಯಲೋಪದ ಅಡಿಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ