ಉದಯೋನ್ಮುಖ ವಲಯಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಹೆಚ್ಚಿಸಲು ಖಾಸಗಿ ವಲಯ ಉತ್ತೇಜಿಸಲು 50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರು. ಮೊತ್ತದ ಕಾರ್ಪಸ್ ಫಂಡ್ (ಮೀಸಲು ನಿಧಿ) ಸ್ಥಾಪಿಸಲಾಗುವುದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಅಲ್ಲದೆ, ತಂತ್ರಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಯವಕರಿಗೆ ಇದು ಸುವರ್ಣ ಯುಗವಾಗಿದೆ ಎಂದು ಹೇಳಿದೆ.
‘50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರುಪಾಯಿಗಳ ಕಾರ್ಪಸ್ ಸ್ಥಾಪಿಸಲಾಗುವುದು. ಕಾರ್ಪಸ್ ನಿಧಿಯು ದೀರ್ಘಾವಧಿಯ ಹಣಕಾಸು ಸೇವೆ ನೀಡಲಿದೆ.
ಇದನ್ನು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳೊಂದಿಗೆ ಒದಗಿಸುತ್ತದೆ’ ಎಂದಿದೆ.‘ಉದಯೋನ್ಮುಖ ವಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಸರ್ಕಾರ ಉತ್ತೇಜಿಸುತ್ತದೆ.
ನಮ್ಮ ಯುವ ಶಕ್ತಿ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಬೇಕು’ ಎಂದಿದೆ.