ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ವೈರಸ್‌ಗೆ ಮತ್ತೆ 5 ಬಲಿ: ಸಾವು 32ಕ್ಕೆ ಏರಿಕೆ

KannadaprabhaNewsNetwork |  
Published : Jul 22, 2024, 01:22 AM ISTUpdated : Jul 22, 2024, 04:55 AM IST
ಚಾಂದೀಪುರ್ ವೈರಸ್‌ | Kannada Prabha

ಸಾರಾಂಶ

ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ಸೋಂಕಿಗೆ ಭಾನುವಾರ ಮತ್ತೆ ಐವರು ಮೃತಪಟ್ಟಿದ್ದಾರೆ.

ಅಹಮದಾಬಾದ್‌: ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂದಿಪುರ ಸೋಂಕಿಗೆ ಭಾನುವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ವಡೋದರಾ, ಮಹಿಸಾಗರ್‌ ಹಾಗೂ ಖೇಡಾದಲ್ಲಿ ತಲಾ ಒಂದೊಂದು ಹಾಗೂ ಬನಸ್ಕಾಂತಾದಲ್ಲಿ ಇಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಹೊಸದಾಗಿ 13 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ತಲುಪಿದೆ.

ಈ ನಡುವೆ ಚಾಂದಿಪುರ ವೈರಸ್‌ ತಡೆಗಟ್ಟಲು ರಾಜ್ಯ ಸರ್ಕಾರ ಈಗಾಗಲೇ 1.16 ಲಕ್ಷ ಮನೆಗಳಿಗೆ ಸೋಂಕು ನಿರೋಧಕಗಳನ್ನು ಸಿಂಪಡಣೆ ಮಾಡಿದ್ದು, 19,000 ಸ್ಥಳಗಳಲ್ಲಿ ನಿರಂತರ ತಪಾಸಣೆಗಳನ್ನು ನಡೆಸುತ್ತಿದೆ.

2003-04ರಲ್ಲಿಯೂ ಕಾಣಿಸಿಕೊಂಡಿದ್ದ ಈ ಸೋಂಕು ಕಾಣಿಸಿಕೊಂಡಿತ್ತು. ಆಗ ಇದರ ಮರಣ ಪ್ರಮಾಣವು ಶೇ.76ರಷ್ಟಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ ಗುಜರಾತ್‌, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಿಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ.

ಸೊಳ್ಳೆ, ನೊಣದಿಂದ ಸೋಂಕು

ಚಾಂದಿಪುರ ಸೋಂಕು ಸೊಳ್ಳೆ, ನೊಣ ಉಣ್ಣೆ ಹುಳುವಿನಿಂದ ಹರಡುವ ವೈರಸ್‌ ಆಗಿದ್ದು, ಫ್ಲೂ ರೀತಿಯದ್ದಾಗಿದೆ. ಇದಕ್ಕೆ ತುತ್ತಾದವರು ಜ್ವರ, ಕೆಮ್ಮು, ತಲೆ ನೋವು ಹಾಗೂ ಮೆದುಳು ಉರಿಯೂತದಿಂದ ಬಳಲುತ್ತಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!
ಸಿಡ್ನಿಯಲ್ಲಿ ಇನ್ನೊಂದು ದಾಳಿ ಸಂಚು ವಿಫಲ